ಆಂಧ್ರಪ್ರದೇಶದ ವನಜಂಗಿಯಲ್ಲಿ ಕಂದಕಕ್ಕೆ ಬಿದ್ದ ಬಸ್: 10 ಮಂದಿ ಸಾವು

ಆಂಧ್ರಪ್ರದೇಶ: ಪ್ರವಾಸಿ ಬಸ್ಸೊಂದು ಬೆಟ್ಟದಿಂದ ಬಿದ್ದು, ಸುಮಾರು ಹತ್ತು ಜನರು ಸಾವನ್ನಪ್ಪಿದ ಘಟನೆ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ವನಜಂಗಿಯಲ್ಲಿ ನಡೆದಿದೆ. ವಿಶಾಖಪಟ್ಟಣಂನಿಂದ ಪಡೇರುವಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಹತ್ತು ಜನರು ಮೃತಪಟ್ಟಿದ್ದು, ಗಾಯಗೊಂಡ ಎಲ್ಲಾ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.