ಅ. 11 ರಿಂದ ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕರ್ನಾಟಕ ತಂಡ ಪ್ರಕಟ

ಬೆಂಗಳೂರು: 2022-23 ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗಾಗಿ ಕರ್ನಾಟಕ ತಂಡವನ್ನು ಪ್ರಕಟ ಮಾಡಲಾಗಿದೆ. ತಂಡದ ನಾಯಕನಾಗಿ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟೂರ್ನಿಯು ಅ. 11 ರಿಂದ ಶುರುವಾಗಲಿದ್ದು, ಭಾರತದ ಆರು ನಗರಗಳಲ್ಲಿ ನಡೆಯಲಿದೆ. ಅದರಂತೆ ರಾಜ್​ಕೋಟ್, ಮೊಹಾಲಿ, ಜೈಪುರ್, ಇಂದೋರ್, ಲಕ್ನೋ ನಗರಗಳಲ್ಲಿ ಮೊದಲ ಸುತ್ತಿನ ಪಂದ್ಯಗಳು ನಡೆಯಲಿವೆ. ನಾಕೌಟ್ ಹಂತದ ಪಂದ್ಯಗಳು ಕೋಲ್ಕತ್ತಾದಲ್ಲಿ ಜರುಗಲಿದೆ. ಹಾಗೆಯೇ ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನ ನ. 5 ರಂದು ನಡೆಯಲಿರುವ ಫೈನಲ್ ಪಂದ್ಯದ ಆತಿಥ್ಯವಹಿಸಲಿದೆ.

ಈ ತಂಡದಲ್ಲಿ ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್, ಕೃಷ್ಣಪ್ಪ ಗೌತಮ್, ಮನೀಶ್ ಪಾಂಡೆ, ಚೇತನ್ ಎಲ್ಆರ್, ಮನೋಜ್ ಭಾಂಡಗೆ, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಲುವ್​ನೀತ್ ಸಿಸೋಡಿಯಾ, ಶರತ್ ಬಿಆರ್, ಕೌಶಿಕ್ ವಿ, ವೈಶಾಕ್ ವಿ, ಕಾವೇರಪ್ಪ, ವೆಂಕಟೇಶ್ ಎಂ. ಇದ್ದಾರೆ. ಕರ್ನಾಟಕ ತಂಡವು ಮೊಹಾಲಿಯಲ್ಲಿ ತನ್ನ ಮೊದಲ ಸುತ್ತಿನ ಪಂದ್ಯಗಳನ್ನು ಆಡಲಿದೆ.