ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ನರಿ: ಮೂವರಿಗೆ ಗಾಯ

ಹಾವೇರಿ: ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ನರಿ ದಾಳಿ ಮಾಡಿದ ಘಟನೆ ಬ್ಯಾಡಗಿ ತಾಲೂಕಿನ ಕಲ್ಲೆದೇವರು ಗ್ರಾಮದ ಬಳಿ ನಡೆದಿದೆ. ಹರೀಶ ಲಮಾಣಿ (19), ಶಂಕರಪ್ಪ ಲಮಾಣಿ (55) ಮತ್ತು ರುದ್ರಪ್ಪ ಲಮಾಣಿ (48) ವರ್ಷ ಗಾಯಗೊಂಡವರು. ರೈತರು ರೇಷ್ಮೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನರಿ ದಾಳಿ ಮಾಡಿ ತೊಡೆ, ಕೈ, ಕಾಲುಗಳಿಗೆ ಕಚ್ಚಿ ಗಾಯಗೊಳಿಸಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.