ಮಾವಿನಹಣ್ಣು ಕದ್ದ ಪೊಲೀಸ್ ಅಧಿಕಾರಿ ಅಮಾನತು.!

ಕೇರಳ: ಮಾವಿನ ಹಣ್ಣನ್ನ ಕದ್ದ ಪೊಲೀಸ್ ಅಧಿಕಾರಿಯನ್ನ ಅಮಾನತು ಮಾಡಿರುವ ಘಟನೆ ಕೊಟ್ಟಯಂನಲ್ಲಿ ನಡೆದಿದೆ. ಎಆರ್ ಕ್ಯಾಂಪ್ ನ ಸಿವಿಲ್ ಪೊಲೀಸ್ ಅಧಿಕಾರಿ ಶಿಹಾಬ್ ಮಾವಿನಹಣ್ಣು ಕದ್ದ ಪೊಲೀಸ್ ಅಧಿಕಾರಿ.

ಮುಂಡಕ್ಕಾಯಂ ಮೂಲದ ಪೊಲೀಸ್ ಅಧಿಕಾರಿ ಶಿಹಾಬ್, ಇಡುಕ್ಕಿಯಲ್ಲಿ ಮುಂಜಾನೆ ರಸ್ತೆ ಬದಿಯ ಅಂಗಡಿಯಲ್ಲಿ 10 ಕೆಜಿ ಮಾವಿನ ಹಣ್ಣುಗಳನ್ನು ಕದ್ದಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಹರಿದಾಡುತ್ತಿದೆ.

ಈ ಘಟನೆ ಕೇರಳ ಪೊಲೀಸ್ ಇಲಾಖೆಗೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಇದರ ಹಿನ್ನೆಲೆಯಲ್ಲಿ ಇಡುಕ್ಕಿ ಎಸ್‌ಪಿ ಪೊಲೀಸ್ ಅಧಿಕಾರಿ ಶಿಹಾಬ್‌ ನನ್ನು ಅಮಾನತು ಮಾಡಿದ್ದಾರೆ. ಅಲ್ಲದೇ ಈ ಕುರಿತು ಕಂಜಿರಪಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.