ವಿಪಕ್ಷಗಳಿಗೆ ಹಿನ್ನಡೆ: ನೂತನ ಸಂಸತ್ ಭವನದ ಸಿಂಹದ ಪ್ರತಿಮೆ ರಾಷ್ಟ್ರ ಲಾಂಛನ ಕಾಯ್ದೆ ಉಲ್ಲಂಘಿಸಿಲ್ಲ ಎಂದ ಸುಪ್ರೀಂ

ನವದೆಹಲಿ: ನೂತನ ಸಂಸತ್ ಭವನದ ಮೇಲಿರುವ ಸಿಂಹದ ಪ್ರತಿಮೆ 2005 ರ ಭಾರತದ ರಾಷ್ಟ್ರ ಲಾಂಛನ ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.

ನ್ಯಾಯಮೂರ್ತಿ ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ನ್ಯಾಯಪೀಠ, ಹೊಸ ಶಿಲ್ಪವು ಭಾರತದ ರಾಷ್ಟ್ರ ಲಾಂಛನ ಕಾಯಿದೆಯಲ್ಲಿ ಅನುಮೋದಿಸಲಾದ ರಾಷ್ಟ್ರೀಯ ಲಾಂಛನದ ವಿನ್ಯಾಸಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ಇಬ್ಬರು ವಕೀಲರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿ ತೀರ್ಪು ನೀಡಿದೆ.