ಡಿಸಿ ಹಾಗೂ ಎಸಿ ಕಚೇರಿಗಳ ಎಸ್‌.ಎಲ್‌.ಒ. ಆಸ್ತಿ ಜಪ್ತಿಗೆ ಕೋರ್ಟ್ ಆದೇಶ

ಕಾರವಾರ: ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ಕಾರವಾರ ಉಪ ವಿಭಾಗಾಧಿಕಾರಿ, ವಿಶೇಷ‌ ಭೂ ಸ್ವಾಧಿನಾಧಿಕಾರಿ ಕಚೇರಿಯ ವಾಹನ, ಆಸ್ತಿಗಳ ಮುಟ್ಟುಗೋಲಿಗೆ ನ್ಯಾಯಾಲಯ ಆದೇಶಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಅಧಿಕಾರಿಗಳ ತಂಡ ಕಚೇರಿಗೆ ಆಗಮಿಸಿದೆ.

ಹೆಸ್ಕಾಂನಿಂದ ಸಿದ್ದರದಲ್ಲಿ ಗ್ರಿಡ್ ನಿರ್ಮಾಣಕ್ಕೆ ಮತ್ತು ಕಚೇರಿ ನಿರ್ಮಾಣಕ್ಕೆ ಖಾಸಗಿ ವ್ಯಕ್ತಿಗಳ ಜಮೀನು ಖರೀಸಿದಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ಸೀ ಬರ್ಡ್ ನಿರಾಶ್ರಿತ ಮಹಿಳೆಗೆ ಪರಿಹಾರ ನೀಡಲಾಗಿತ್ತು. ಈ ಎರಡು ಪ್ರಕರಣಗಳಲ್ಲಿ ಆದಾಯ ತೆರಿಗೆ ಹಿಡಿದಿಟ್ಟುಕೊಳ್ಳಲಾಗಿತ್ತು. ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆಸ್ತಿ ಜಪ್ತಿಗೆ ಆದೇಶ ಮಾಡಿದೆ.