ಸ್ನಾನ ಮಾಡಲು ಹಳ್ಳಕ್ಕೆ ಹೋದ ಯುವಕ ನೀರುಪಾಲು

ಕುಮಟಾ: ತಾಲೂಕಿನ ಸಂತೆಗುಳಿಯ ಕೊಳೆಗೇರ್ ಕ್ರಾಸ್ ಬಳಿಯ ಹಳ್ಳದಲ್ಲಿ ಸ್ನಾನ ಮಾಡಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟದ್ದಾನೆ. ಹಳೇ ಹುಬ್ಬಳ್ಳಿಯ ಟಿಪ್ಪು ನಗರ ನಿವಾಸಿ ಶಾಬಾಜ್ ಮಹಮ್ಮದ್ ಹನೀಫ್ ತೋಟಗೇರ್ ಮೃತಪಟ್ಟ ಯುವಕ.

ಮೃತ ಶಾಬಾಜ್ ತಾಲೂಕಿನ ಸಂತೆಗುಳಿಯ ಮನೆಯೊಂದರಲ್ಲಿ ಪೇಂಟಿಂಗ್ ಕೆಲಸಕ್ಕೆಂದು ತಂದೆ ಹಾಗೂ ಸಹೋದರನ ಜೊತೆ ಹುಬ್ಬಳ್ಳಿಯಿಂದ ಬಂದಿದ್ದ. ಸಹೋದರ ಮಲ್ಲಿಕ್ ರಿಹಾನ್ ಜೊತೆ ಸಂತೆಗುಳಿಯ ಕೊಳೆಗೇರ ಕ್ರಾಸ್ ಸಮೀಪದ ಹಳ್ಳದಲ್ಲಿ ಸ್ನಾನ ಮಾಡುತ್ತಿರುವ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.