ಬ್ರಹ್ಮಪುತ್ರ ನದಿಯಲ್ಲಿ ದೋಣಿ ಮುಳುಗಡೆ: 20 ಕ್ಕೂ ಹೆಚ್ಚು ಜನರು ನಾಪತ್ತೆ

ಅಸ್ಸಾಂ: ಧುಬ್ರಿ ಜಿಲ್ಲೆಯ ಬ್ರಹ್ಮಪುತ್ರ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಬಳಿ ಸವೆತದ ತಪಾಸಣೆಗಾಗಿ ತಂಡವನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಡೆಯಾಗಿದೆ. ಈ ಅವಘಡದಲ್ಲಿ ಅಧಿಕಾರಿ ಸೇರಿದಂತೆ ಕನಿಷ್ಠ ಏಳು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಧುಬ್ರಿ-ಫುಲ್ಬರಿ ಸೇತುವೆಯ ಬಳಿ ಸಣ್ಣ ಕಾಲುವೆಯಿದ್ದು, ತಪಾಸಣೆಗೆ ತೆರಳಿದ ತಂಡವು ಮರದ ದೋಣಿಯಲ್ಲಿ ಈ ಕಾಲುವೆ ದಾಟುತ್ತಿದ್ದಾಗ ಡಿಕ್ಕಿ ಹೊಡೆದು ದೋಣಿ ಮಗುಚಿದೆ. ದೋಣಿಯಲ್ಲಿ ಸುಮಾರು 25 ಮಂದಿ ಇದ್ದರು ಅವರಲ್ಲಿ ಹಲವರು ಧುಬ್ರಿ ಸರ್ಕಲ್ ಆಫೀಸಿನಿಂದ ಬಂದವರು ಎಂದು ಧುಬ್ರಿ ಜಿಲ್ಲಾಧಿಕಾರಿ ಎಂ.ಪಿ ಅನ್ಬಮುತ್ತನ್ ತಿಳಿಸಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯವನ್ನು ನಡೆಸುತ್ತಿದೆ.