ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ಕೈಗೆ ಗೋರಂಟಿ ಹಾಕಿಕೊಂಡಿದ್ದರೇ.? – ಕೇಂದ್ರಕ್ಕೆ ಬಿ.ಕೆ ಹರಿಪ್ರಸಾದ್ ಪ್ರಶ್ನೆ

ಬೆಂಗಳೂರು: ಪಿಎಫ್​ಐ ನಿಷೇಧ ಚುನಾವಣೆಯ ಸ್ಟಂಟ್ ಅಷ್ಟೇ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ. PFI ಬ್ಯಾನ್ ಸಂಬಂಧ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಅನುಕಂಪ ಗಿಟ್ಟಿಸಿಕೊಳ್ಳಲು ಪಿಎಫ್​ಐ ನಿಷೇಧ ಮಾಡಿದ್ದಾರೆ. ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ಕೈಗೆ ಗೋರಂಟಿ ಹಾಕಿಕೊಂಡಿದ್ದರೇ.? ಎಂದು ಹರಿಪ್ರಸಾದ್ ಪ್ರಶ್ನಿಸಿದರು. ಇದು ಚುನಾವಣೆಯ ಸ್ಟಂಟ್ ಅಷ್ಟೇ. ಮೋದಿಗೆ ಬೆದರಿಕೆ ಇರುವುದರಿಂದ ಪಿಎಫ್​ಐ ನಿಷೇಧ ಮಾಡಿರುವುದಾಗಿ ಕಾರಣಗಳನ್ನ ಕೊಟ್ಟಿದ್ದಾರೆ. ಗುಜರಾತ್ ಚುನಾವಣೆ ಬಂದಾಗ ಮಾತ್ರ ಮೋದಿಗೆ ಕೊಲೆ ಬೆದರಿಕೆ ಬರುತ್ತದೆ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.