ಶಿರಸಿಯಲ್ಲಿ ಮುಂದುವರೆದ ಪೊಲೀಸರ ಕಾರ್ಯಾಚರಣೆ: ಮತ್ತೆ ಮೂವರು ಪಿಎಫ್ಐ ಕಾರ್ಯಕರ್ತರ ಬಂಧನ

ಶಿರಸಿ: ಪಿಎಫ್ಐ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಇಂದು ಮೂವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರನ್ನೂ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ, ಶಾಂತಿಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆಯಿಂದ ಮುಂಜಾಗೃತ ಕ್ರಮವಾಗಿ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧನ ಮಾಡಿದ್ದಾರೆ.

ಸೆ. 22 ರಂದು ಎನ್.ಐ.ಎ ಬಂಧಿಸಿದ್ದ ಅಬ್ದುಲ್ ಅಜೀಜ್ ಶುಕೂರ್ ಹೊನ್ನಾವರ್ ನ ಸಹೋದರ ಟಿಪ್ಪು ನಗರದ
ಅಬ್ದುಲ್ ರಜಾಕ್ ಅಬ್ದುಲ್ ಶುಕುರ್ ಹೊನ್ನಾವರ (28), ಕೆರೆಕೊಪ್ಪದ ಮ್ಯಕಾನಿಕ್ ಇಮಾಮ್ ತಂದೆ ಅಬ್ದುಲ್ ಸಮ್ಮದ್ ಸಾಬ್ (32), ಟಿಪ್ಪು ನಗರದ ವಾಹನ ಚಾಲಕ ಅತಾವುಲ್ಲ ತಂದೆ ಅಬ್ದುಲ್ ಗಣಿ ತಡಸ್ (29) ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಗುಂಪು ಸೇರಿಸಿ ಗಲಭೆ ಮಾಡುವ ಉದ್ದೇಶ ಸೇರಿದಂತೆ PAR NO: 19/22 u/s 107,151 crpc ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಡಿ.ಎಸ್.ಪಿ ರವಿ ಡಿ.ನಾಯ್ಕ್, ಸಿಪಿಐ ರಾಮಚಂದ್ರ ನಾಯಕ್ ಮಾರ್ಗದರ್ಶನದಲ್ಲಿ, ಪಿಎಸ್ ಐ ಪ್ರತಾಪ್, ಭಿಮಾಶಂಕರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಂಡಿದ್ದ ಮೂವರನ್ನು ಬಂಧಿಸಿದ್ದಾರೆ.