ತೋಟದ ಮನೆಯಲ್ಲಿಟ್ಟಿದ್ದ 4 ಕ್ವಿಂಟಲ್ ಅಡಿಕೆ ಕಳ್ಳತನ: ಆರೋಪಿಗಳ ಬಂಧನ

ಶಿರಸಿ: ತೋಟದ ಮನೆಯಲ್ಲಿಟ್ಟಿದ್ದ ಅಡಿಕೆ ಕಳ್ಳತನ ಮಾಡಿದ ಘಟನೆ ತಾಲೂಕಿನ ಬನವಾಸಿಯಲ್ಲಿ ನಡೆದಿದೆ. ಶೇಖರ್ ಗೌಡ (42), ರಾಘವೇಂದ್ರ ಶಿರಟ್ಟಿ (30) ಅಡಿಕೆ ಕಳ್ಳತನ ಮಾಡಿದ್ದ ಆರೋಪಿಗಳು.

ಆ. 30 ನೇ ತಾರೀಖು ಅಬ್ದುಲ್ ಮಮ್ಮದ ಸಾಬ್ ತೋಟದ ಮನೆಯಲ್ಲಿಟ್ಟದ್ದ ಅಂದಾಜು 1 ಲಕ್ಷ ಮೌಲ್ಯದ 4 ಕ್ವಿಂಟಲ್ ಅಡಿಕೆಯನ್ನು ಕಳ್ಳತನವನ್ನು ಮಾಡಿ ಪರಾರಿಯಾಗಿದ್ದರು. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.