ಮುರ್ಡೇಶ್ವರದ ಶಿವಕೃಪ ಲಾಡ್ಜ್ ಮೇಲೆ ಪೊಲೀಸರ ದಾಳಿ: ಇಬ್ಬರು ಮಹಿಳೆಯರ ರಕ್ಷಣೆ, ನಾಲ್ವರ ಬಂಧನ

ಭಟ್ಕಳ:  ಶಿವಕೃಪ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿ ಇಬ್ಬರನ್ನು ಬಂಧನ ಮಾಡಿದ್ದು, ಓರ್ವ ಪರಾರಿಯಾಗಿರುವ ಘಟನೆ ಮುರ್ಡೇಶ್ವರದಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ನಾಗರಾಜ ಮಂಜುನಾಥ ಮೊಗೇರ ಇನ್ನೋರ್ವ ಮಯೂರ ಎಂದು ತಿಳಿದು ಬಂದಿದೆ. ಪರಾರಿಯಾದ ಆರೋಪಿ ಶಿವಪ್ರಸಾದ್ ರಾವ್ ಎಂದು ತಿಳಿದು ಬಂದಿದೆ. ಇವರು ತಮ್ಮ ಲಾಭಗೊಸ್ಕರ ನೊಂದ ಮಹಿಳೆಯರನ್ನು ಕರೆಸಿ ಮುರ್ಡೇಶ್ವರ ಶಿವಕೃಪ ಲಾಡ್ಜನಲ್ಲಿ ಇರಿಸಿ ಗಿರಾಕಿಗಳಿಂದ ಬಂದ ಹಣವನ್ನು ಪಡೆದುಕೊಂಡು ಮಹಿಳೆಯರನ್ನು ಲೈಂಗಿಕ ಶೋಷಣೆ ಒಳಪಡಿಸಿದ್ದು. ಈ ವೇಳೆ ದಾಳಿ ನಡೆಸಿ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಮಹಿಳೆಯರಲ್ಲಿ ಓರ್ವ ಮಹಿಳೆ ಹಾಸನ, ಇನ್ನೋರ್ವ ಮಹಿಳೆ ಬೆಂಗಳೂರು ಮೂಲದವರಾಗಿದ್ದಾರೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.