ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ಅರೆಸ್ಟ್.!

ಪಂಜಾಬ್: ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳಾದ ಮನ್‌ಪ್ರೀತ್ ಸಿಂಗ್ ಅಲಿಯಾಸ್ ಮಣಿ ರೈಯಾ ಮತ್ತು ಮನ್‌ದೀಪ್ ತೂಫಾನ್ ಅವರನ್ನು ಅಮೃತಸರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಅಜ್ನಾಲಾ ರಸ್ತೆಯ ಕುಕ್ಕಡವಾಲಾ ಗ್ರಾಮದಿಂದ ಮಣಿ ರೈಯಾನನ್ನು ಮತ್ತು ಖಾಖ್ ಗ್ರಾಮದ ಮನ್ದೀಪ್ ತೂಫಾನ್ ಅವರನ್ನು ಬಂಧಿಸಲಾಗಿದೆ. ಮುಂಜಾನೆಯ ಕಾರ್ಯಾಚರಣೆಯನ್ನು ಪೊಲೀಸರು ಸಂಪೂರ್ಣವಾಗಿ ಗೌಪ್ಯವಾಗಿ ನಡೆಸಿದ್ದಾರೆ.

ದರೋಡೆಕೋರ ರಾಣಾ ಕಂಡೋವಾಲಿಯಾ ಅವರನ್ನು ಗುಂಡು ಹಾರಿಸಿ ಕೊಂದಿದ್ದರು. ಜಗ್ಗು ಭಗವಾನ್‌ಪುರಿಯ ಖಾಸ್ ಖಿಲ್ಚಿನ್ಯಾ ನಿವಾಸಿಗಳಾದ ಮನ್‌ಪ್ರೀತ್ ಸಿಂಗ್ ಅಲಿಯಾಸ್ ಮಣಿ ರೈಯಾ ಮತ್ತು ಮನ್‌ದೀಪ್ ತೂಫಾನ್‌ಗಾಗಿ ಪೊಲೀಸರು ಕಳೆದ ಒಂದೂವರೆ ವರ್ಷಗಳಿಂದ ಹುಡುಕುತ್ತಿದ್ದರು. ರಾತ್ರಿಯೇ ಅಮೃತಸರ ಗ್ರಾಮಾಂತರ ಪೊಲೀಸರಿಗೆ ಮಣಿರಾಯನ ಕುಕ್ಕಡವಾಲಾ ಮತ್ತು ಮಂದೀಪ್ ತೂಫಾನ್ ಜಂಡಿಯಾಲ ಗುರು ಸಮೀಪದ ಖಾಖ್ ಗ್ರಾಮದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.

ಬೆಳಗಿನ ಜಾವ 3-5 ರ ನಡುವೆ ಪೊಲೀಸರು ಮಣಿ ರೈಯಾ ಮತ್ತು ಮಂದೀಪ್ ತೂಫಾನ್ ಇಬ್ಬರನ್ನೂ ಪ್ಲಾನ್ ಮಾಡಿ ಬಂಧಿಸಿದ್ದಾರೆ. ಆದರೆ ಪೊಲೀಸರು ಇವರಿಬ್ಬರ ಬಂಧನವನ್ನು ಇನ್ನೂ ಖಚಿತಪಡಿಸಿಲ್ಲ.