ಮಠಕ್ಕೆ ಮರಳಿದ ಮುರುಘಾ ಶ್ರೀ ಹೇಳಿದ್ದೇನು.?

ಚಿತ್ರದುರ್ಗ: ಮುರುಘಾ ಮಠಕ್ಕೆ ಆಗಮಿಸಿದ ಬಳಿಕ ಈ ಎಲ್ಲಾ ಬೆಳವಣಿಗೆಗಳಿಗೆ ಸಂಬಂಧ ಪಟ್ಟಂತೆ ಮುರುಘಾ ಶ್ರೀಗಳು ಮೊದಲ ಪ್ರತಿಕ್ರಿಯೇ ನೀಡಿದ್ದಾರೆ.

ಚಿತ್ರದುರ್ಗಕ್ಕೆ ಮರಳಿದ ಬಳಿಕ ಮುರುಘಾ ಶ್ರೀಗಳ ಹೇಳಿಕೆ

ಯಾರೂ ಆತಂಕಕ್ಕೆ ಒಳಗಾಗಬಾರದು. ಧೈರ್ಯ, ಬುದ್ದಿವಂತಿಕೆ ಇಂದ ಎದುರಿಸೋಣ. 15 ವರ್ಷದಿಂದ ನನ್ನ ಮೇಲೆ ಪಿತೂರಿ ನಡೆಯುತ್ತಿದೆ. ನೀವೆಲ್ಲ ಮುರುಘಾ ಶರಣರ ನೋವು ಎಂದು ಭಾವಿಸಿದ್ದೀರಿ. ಇದೊಂದು ನೋವಿನ ಸಂಗತಿಯಾಗಿದೆ. ಇದರಿಂದ ಯಾರು ಆತಂಕ ಪಡುವ ಅಗತ್ಯವಿಲ್ಲ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಈ ನೆಲದ ಕಾನೂನನ್ನು ನಾವು ಪಾಲಿಸುತ್ತೇವೆ. ಸಾಂಘಿಕವಾಗಿ ಎದುರಿಸೋಣ. ನಾವೂ ಎಂದಿಗೂ ನ್ಯಾಯಿಕ ಸ್ಥಾನದಲ್ಲಿ ಇರುತ್ತೇವೆ. ನಾವು ಎಲ್ಲೂ ಪಲಾಯನ ಮಾಡುವುದಿಲ್ಲ, ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಮುರುಘಾ ಶ್ರೀ ಹೇಳಿದ್ದಾರೆ.