‘ಗೆದ್ದುಬರಲಿ ಇಂಡಿಯಾ’.! ಭಾರತದ ಗೆಲುವಿಗೆ ಮುಸ್ಲಿಂ ಯುವಕರಿಂದ ವಿಶೇಷ ಪೂಜೆ.!

ಹುಬ್ಬಳ್ಳಿ: ಇಂದು ದುಬೈನಲ್ಲಿ ನಡೆಯಲಿರುವ ಭಾರತ, ಪಾಕ್ ಹೈವೋಲ್ಟೇಜ್ ಕ್ರಿಕೆಟ್ ಮ್ಯಾಚ್ ನಲ್ಲಿ ಪಾಕ್ ವಿರುದ್ಧ ಭಾರತ ಗೆದ್ದು ಬರಲಿ ಎಂದು ಐತಿಹಾಸಿಕ ದರ್ಗಾದಲ್ಲಿ ಮುಸ್ಲಿಂ ಯುವಕರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪತ್ರಿ ಬಾರಿ ಪಾಕ್ ವಿರುದ್ಧ ಜಯಭೇರಿ ಬಾರಿಸುತ್ತಿದ್ದ ಬ್ಲೂ ಬಾಯ್ಸ್ ಕಳೆದ ಬಾರಿ ಕಳಪೆ ಆಟವಾಡಿ ಸೋತ್ತಿದ್ದರು. ಆದರೆ ಈ ಬಾರಿ ಭಾರತ ಗಲ್ಲಲೇ ಬೇಕು ಎಂದು ಆಶಿಸಿ ಮುಸ್ಲಿಂ ಯುವಕರು ಐತಿಹಾಸಿಕ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕ್ರೀಡಾಭಿಮಾನ ಮೆರೆದಿದ್ದಾರೆ.

ತನ್ನ ಪ್ರತಿಯೊಂದು ಯುದ್ಧಕ್ಕೂ ಮೊದಲು ಟಿಪ್ಪು ಸುಲ್ತಾನ ಈ ದರ್ಗಾಕ್ಕೆ ಪೂಜೆ ಸಲ್ಲಿಸಿ ಬಳಿಕ ಯುದ್ದ ಗೆಲ್ಲುತ್ತಿದ್ದ ಎಂಬ ಪ್ರತೀತಿಯನ್ನು ಹೊಂದಿದ ಹಳೇ ಹುಬ್ಬಳ್ಳಿಯ ಫತೆಷಾ ವಲಿ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.