ವಾಟದಹೊಸಹಳ್ಳಿ ಕೆರೆಗೆ ಟೆಕ್ಕಿಗಳ ದಂಡು.! ವೀಕೆಂಡ್ ನಲ್ಲಿ ಕೆರೆಯಲ್ಲಿ ಈಜಾಡಿ ಫುಲ್ ರಿಲ್ಯಾಕ್ಸ್.!

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಕೆರೆಯು ಧಾರಾಕಾರ ಮಳೆಗೆ ತುಂಬಿ ತುಳುಕುತ್ತಿರುವ ಹಿನ್ನೆಲೆ ಸೌಂದರ್ಯ ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಗುಡಿಬಂಡೆ-ಗೌರಿಬಿದನೂರು ಮಾರ್ಗದ ವಾಟದಹೊಸಹಳ್ಳಿ ಕೆರೆಗೆ ಬೆಂಗಳೂರಿನ ಟೆಕ್ಕಿಗಳು ಆಗಮಿಸುತ್ತಿದ್ದಾರೆ. ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿ ದೂರದೂರಿನಿಂದ ಬಂದ ಪ್ರವಾಸಿಗಳು ಸ್ವಿಮ್ಮಿಂಗ್ ಈವೆಂಟ್ ಆಯೋಜಿಸಿ ಎಂಜಾಯ್ ಮಾಡುತ್ತಿದ್ದಾರೆ.

ಅಲ್ಲದೇ ಬಿಎಂಎಫ್ ಟ್ರೈತಲಾನ್ ಹೆಸರಿನಲ್ಲಿ ಸೈಕ್ಲಿಂಗ್, ಟ್ರೆಕ್ಕಿಂಗ್ , ವಾಕಥಾನ್, ಸ್ವಿಮ್ಮಿಂಗ್ ಸ್ಪರ್ಧೆ ಆಯೋಜಿಸಿಕೊಂಡು ಮೋಜು ಮಸ್ತಿ ಮಾಡಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ.