‘ಹುಲಿ ಹಿಡಿಯಿರಿ’ ಅರಣ್ಯ ಇಲಾಖೆಗೆ ಸಾರ್ವಜನಿಕರಿಂದ ಒತ್ತಾಯ.! ವ್ಯಾಘ್ರನ ದಾಳಿಗೆ ಬಲಿಯಾದ ಜಾನುವಾರು.!

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಾನಳ್ಳಿಯಲ್ಲಿ ಹುಲಿ ದಾಳಿಗೆ ಜಾನುವಾರೊಂದು ಬಲಿಯಾಗಿದೆ.
ಸುಂದರೇಶ್ ಎಂಬುವರಿಗೆ ಸೇರಿದ ಜಾನುವಾರಿನ ಮೇಲೆ ಇಂದು ಮುಂಜಾನೆ ಹುಲಿ ದಾಳಿ ನಡೆಸಿದೆ.

ಬಾನಳ್ಳಿ, ಮತ್ತಿಕಟ್ಟೆ, ಹೊಸಳ್ಳಿ, ಭಾರತಿಬೈಲು ಸುತ್ತಮುತ್ತ ಹುಲಿ ಸಂಚಾರ ಮಾಡುತ್ತಿದ್ದು, ದಿನಕ್ಕೊಂದು ಜಾನುವಾರುಗಳನ್ನ ಬಲಿ ಪಡೆಯುತ್ತಿದೆ. ಇದರಿಂದ ಜನಸಾಮಾನ್ಯರು ಹೊರಗಡೆ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಹುಲಿ ಹಿಡಿಯುವಂತೆ ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ.