ಟಿಎಂಎಸ್ ವಾರ್ಷಿಕ ಸರ್ವ ಸಾಧಾರಣಾ ಸಭೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ, ಹಿರಿಯ ಸದಸ್ಯರಿಗೆ ಸನ್ಮಾನ

ಸಿದ್ದಾಪುರ: ತಾಲೂಕಿನ ಅಡಕೆ ಬೆಳೆಗಾರರ ಒಡನಾಡಿ ಟಿಎಂಎಸ್ ನ ವಾರ್ಷಿಕ ಸರ್ವ ಸಾಧಾರಣಾ ಸಭೆಯಲ್ಲಿ ಸಾಧಕ ವಿದ್ಯಾರ್ಥಿಗಳು, ಹಿರಿಯ ಸದಸ್ಯರನ್ನು ಸನ್ಮಾನಿಸುವ ಜತೆಗೆ ಸಂಘದ ಅಧಿಕೃತ ವೆಬ್ ಸೈಟ್ ಹಾಗೂ ಟಿಎಂಎಸ್ ವ್ಯಾಲೇಟ್ ಲೋಕಾರ್ಪಣೆಗೊಳಿಸಲಾಯಿತು.

ಶುಕ್ರವಾರ ಮಧ್ಯಾಹ್ನ ಸಂಘದ ವ್ಯಾಪಾರಿ ಅಂಗಣದಲ್ಲಿ ನಡೆದ ಸಭೆಯಲ್ಲಿ ಹಿರಿಯ ಸದಸ್ಯರಾದ ವಿಶ್ವೇಶ್ವರ ಹೆಗಡೆ ಓಡ್ಲಕೋಣೆ, ಗಣಪತಿ ಹೆಗಡೆ ಕೆಳಗಿನಮನೆ, ನಾರಾಯಣ ಭಟ್ ದೊಡ್ಮನೆ, ಸರಸ್ವತಿ ಹೆಗಡೆ ಕೊಪ್ಪ, ರಾಜಶೇಖರ ಗೌಡ ಮಳವತ್ತಿ, ಬಡಿಯಾ ನಾಯ್ಕ ಹಸವಿಗುಳಿ, ನಾರಾಯಣ ನಾಯ್ಕ ಬೇಡ್ಕಣಿ, ತಿಮ್ಮಾ ನಾಯ್ಕ ಮಾಸ್ತಿಕೊಂಡ, ಗಣಪತಿ ಮಡಿವಾಳ ಮರಲಗಿ, ಬೀರ ಗೌಡ ಅಳಗೋಡ ಇವರನ್ನು ಸನ್ಮಾನಿಸಲಾಯಿತು.

ಜತೆಗೆ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ತುಷಾರ ಶಾನಭಾಗ, ಕುಮಾರ ಸತ್ಯನಾರಾಯಣ ಭಟ್, ಮೀನಾಕ್ಷಿ ಗೌಡ, ರಜತ ಹೆಗಡೆ, ಪವಿತ್ರಾ ಕಾಮತ, ಲೀಫ್ ಆರ್ಟಿನಲ್ಲಿ ಸಾಧನೆ ಮಾಡಿದ ತೃಪ್ತಿ ನಾಯ್ಕ ಹೊಸಮಂಜು, ಧನ್ಯ ಹೆಗಡೆ ಗುಡ್ಡೆಶಿರಗೋಡ, ಚೆಸ್ ನಲ್ಲಿ ಸಾಧನೆ ಮಾಡಿದ ಭರತ್ ಹೆಗಡೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಾಹಿತಿ ತಮ್ಮಣ್ಣ ಬೀಗಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ತಾಲೂಕಿನ ದೊಡ್ಮನೆ ಸೇವಾ ಸಹಕಾರಿ ಸಂಘ, ತಾರೇಹಳ್ಳಿ ಕಾನಸೂರ ಸೇವಾ ಸಹಕಾರಿ ಸಂಘ ಹಾಗೂ ಲಂಬಾಪುರ ಸೇವಾ ಸಹಕಾರಿ ಸಂಘಕ್ಕೆ ಬಹುಮಾನ ವಿತರಿಸಲಾಯಿತು.