ಶಿರಸಿ:
ಶತಾವಧಾನಿ, ಪದ್ಮಭೂಷಣ ಡಾ. ಆರ್.ಗಣೇಶ ಅವರು ನಗರದ ರಂಗಧಾಮದಲ್ಲಿ ಬೆಂಗಳೂರಿನ ಸಪ್ತಕ ಸಂಸ್ಥೆ ಹಮ್ಮಿಕೊಂಡ ಋತುಗಾನ – ವ್ಯಾಖ್ಯಾನದಲ್ಲಿ ದೀಪ ಬೆಳಗಿಸಿ ಅವರು ಮಾತನಾಡಿ ವೇದ ಕಾಲದಿಂದ ಹಿಡಿದು ಋತುಗಳ ವರ್ಣನೆ ಮಾಡಲಾಗಿದೆ. ಭೂಮಿ, ವಾಯು, ಆಕಾಶ ಎಲ್ಲವೂ ಕಾವ್ಯ, ಸನಾತನ, ದೈವಿಕ ದೃಷ್ಟಿಯಿಂದಲೂ ಮಹತ್ವದ್ದು. ಸನಾತನ ದೃಷ್ಟಿಯಿಂದಲೂ ಭರತ ಭೂಮಿ ಈ ಕಾರಣಗಳಿಂದ ಸ್ವರ್ಗಕ್ಕಿಂತ ಮಿಗಿಲು ಎಂದರು.

ಋತುಗಳಿಗೆ ಸರಿಯಾಗಿ ಭಾರತೀಯ ಸಾಹಿತ್ಯ ಪೂರಕವಾಗಿದೆ. ಗ್ರೀಕ್ ನಲ್ಲಿ ಇದೇ ಮಾದರಿಯ ಭೂಮಿ ಇತ್ತಂತೆ. ಈಗ ಅಲ್ಲಿ ಇಲ್ಲ. ಭಾರತದಲ್ಲಿ ಉಳಿದುಕೊಂಡಿದೆ ಎಂದರು. ಭೂಮಿಯನ್ನು ಕೊಚ್ಚೆ ಮಾಡುತ್ತಿದ್ದೇವೆ. ಪರಿಸರದಲ್ಲಿ ಬಣ್ಣ ಬೆಡಗು ಕಾಣದಿದ್ದರೆ ಸಂಸ್ಕೃತಿಯಲ್ಲಾದರೂ ಮಾಡಿಕೊಳ್ಳಬೇಕು ಎಂದರು. ವರ್ಷಧಾರೆಯ ಲೆಕ್ಕದಲ್ಲಿ ವರ್ಷ ಅಳೆಯುವದು ಇದೆ. ಭಾರತ ವರ್ಷ ಎಂದೂ ಭಾರತದ ಕಾಲ ಹೇಳುವದು ಇದೆ. ಕಾಲದ ಸಂಕೇತ ದೇಶದ ಸಂಕೇತವೂ ವರ್ಷಕ್ಕಿದೆ ಎಂದು ಬಣ್ಣಿಸಿದರು.

ಋತುವಿಗೆ ವ್ಯಾಖ್ಯಾನ, ಕಾವ್ಯದ ಬೆಸುಗೆ:
ಋತು ಹಾಗೂ ಗಾನದ ಕಲ್ಪನೆಯನ್ನು ಸ್ವರಚಿತ ಕನ್ನಡದ ಕೃತಿಗಳನ್ನು ನೀಡಿದ ಡಾ. ರವೀಂದ್ರ ಗುರುರಾಜ ಕಾಟೋಟಿ ಅವರು ಹಾರ್ಮೋನಿಯಂ ಸಾಥ್ ಕೂಡ ನೀಡಿದರು. ತಬಲಾದಲ್ಲಿ ಗುರುರಾಜ ಆಡುಕಳ, ಗಾಯನದಲ್ಲಿ ರೇಷ್ಮಾ ಭಟ್, ಡಾ. ಆದಿತ್ಯ ಪಲ್ಲಕ್ಕಿ ಹಾಡಿದರು.

ಈ ವೇಳೆ ಮಾತನಾಡಿದ ಸಪ್ತಕ ಜಿ.ಎಸ್. ಹೆಗಡೆ, ಸಂಗೀತದ ಒಳನೋಟ ಹಾಗೂ ಹೆಚ್ಚಿನ ಸಾಧ್ಯಾಸಾಧ್ಯತೆಯನ್ನ ತೋರುವ ಕಾರ್ಯಕ್ರಮ ಇದಾಗಿದ್ದು, ಇನ್ನೂ ಹಲವು ವಿಶೇಷ, ವಿಶಿಷ್ಟ ಕಾರ್ಯಮಗಳನ್ನ ಶಿರಸಿ ಸುತ್ತ ಮುತ್ತಲಿನ ಪ್ರಜ್ಞಾವಂತ ಕಲಾಸಕ್ತರಿಗೆ ನೀಡಲು ಸಪ್ತಕ ಉತ್ಸುಕವಾಗಿದೆ ಎಂದರು.
