ಸಿದ್ದರಾಮಯ್ಯ ನೆರೆಹಾನಿ ಪ್ರದೇಶದ ಭೇಟಿ ಒಂದು ನಾಟಕ.! ಯಾರ ವಿರುದ್ಧ ನಿಮ್ಮ ಕಾಲ್ನಡಿಗೆ.? ಸಚಿವ ಸುನೀಲ್ ಕುಮಾರ್ ಪ್ರಶ್ನೆ.!

ಉಡುಪಿ: ಯಾರ ವಿರುದ್ಧ ಕೊಡಗು ಚಲೋ ಮಾಡುತ್ತೀರಿ.? ಎಂದು ಸಚಿವ ಸುನೀಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ನಿಂದ ಮಡಿಕೇರಿ ಚಲೋ ವಿಚಾರವಾಗಿ ಪ್ರತಿಕ್ರಯಿಸಿದ ಸಚಿವರು ಇದರಲ್ಲಿ ಕಾಂಗ್ರೆಸ್‌ ನ ಟೂಲ್ ಅಜೆಂಡಾ ಕಾಣುತ್ತಿದೆ. ತಮ್ಮ ನಾಯಕರ ವಿರುದ್ಧ ತಮ್ಮ ಕಾರ್ಯಕರ್ತರೇ ಪ್ರತಿಭಟನೆ ಮಾಡುವುದು, ಆಂತರಿಕ ಭಿನ್ನಾಭಿಪ್ರಾಯಗಳನ್ನು ಸ್ಪೋಟ ಮಾಡುವುದು. ಈಗ ಕೊಡಗು ಚಲೋ ಮಾಡುತ್ತೇವೆ ಅಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಕಾಲ್ನಡಿಗೆ ಮಾಡಲು ಯಾರದ್ದೂ ವಿರೋಧ ಇಲ್ಲ. ನಿಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ನೀವು ಯಾರ ವಿರುದ್ಧ ಕಾಲ್ನಡಿಗೆ ಮಾಡುತ್ತೀರಿ.? ಯಾರ ವಿರುದ್ಧ ನೀವು ಪ್ರತಿಭಟನೆಗಳನ್ನು ಮಾಡುತ್ತೀರಿ.? ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ನೆರೆ ಹಾನಿಯಾಗಿ ಎಷ್ಟು ದಿನ ಆಯ್ತು. ಇವತ್ತು ನೆರೆಪೀಡಿತ ಪ್ರದೇಶಗಳಿಗೆ ಹೋಗುತ್ತಿರುವುದು ಒಂದು ನಾಟಕ. ಪ್ರಿ ಪ್ಲಾನ್ ಆಗಿಯೇ ಸಿದ್ದರಾಮಯ್ಯ ಓಡಾಡುತ್ತಿದ್ದಾರೆ ಎಂದು ಉಡುಪಿಯಲ್ಲಿ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.