ಸಿದ್ದರಾಮಯ್ಯ ಅಮೃತ ಮಹೋತ್ಸವದ ಯಶಸ್ಸಿನಿಂದ ಬಿಜೆಪಿಗರಿಗೆ ಹೊಟ್ಟೆ ಕಿಚ್ಚು.!

ಚಿಕ್ಕಬಳ್ಳಾಪುರ: ಸಿದ್ದರಾಮಯ್ಯ ಮಾತಾಡಿದ್ರೇ ಸಾಕು ವಿರೋಧಿಗಳು ತಿರುಗಿಬೀಳುತ್ತಾರೆ. ಸಿದ್ದರಾಮಯ್ಯ ಅಮೃತ ಮಹೋತ್ಸವದಿಂದ ಅವರಿಗೆ ಹೊಟ್ಟೆ ಕಿಚ್ಚು ಬಂದಿದೆ ಎಂದು ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಹೇಳಿಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ಎಚ್ ಸಿ ಮಹದೇವಪ್ಪ ಭಾಷಣ ಮಾಡಿದ ಅವರು ಸಿದ್ದರಾಮಯ್ಯ ಉತ್ತಮ ಆಡಳಿತ ಕೊಟ್ರು. ಆದರೆ ಬಿಜೆಪಿ ಬಂದ ಮೇಲೆ ಬೆಲೆಗಳು ಗಗನಕ್ಕೆ ಏರಿದವು. ರಾಮ ಮಂದಿರ ಕಟ್ಟಲು ಇಟ್ಟಿಗೆ ಕೊಟ್ಟರು. ರಾಮನವಮಿ ಗೆ ಹಂಚುವ ಮಜ್ಜಿಗೆ ಮೇಲೂ 5 % ಜಿ ಎಸ್ ಟಿ ಹಾಕಿದ್ರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಕೋಮುವಾದಿಗಳಿಗೆ ಸಿದ್ದರಾಮಯ್ಯ ಬೇಕಿಲ್ಲ. ಸಂವಿಧಾನ ಉಳಿಯಬೇಕು ಅನ್ನೋದು ನಮ್ಮ ಆಶಯ. ಸಂವಿಧಾನಕ್ಕೆ ಅಪಾಯ ಇದೆ ಅಂತ ಸಿದ್ದರಾಮಯ್ಯ ಸತ್ಯ ಹೇಳ್ತಿದ್ದಾರೆ. ಅವರ ಬಾಯಿ ಮುಚ್ಚಿಸಿಬಿಡೋಣ ಅಂತ ಮೊಟ್ಟೆ ಒಡೆದರೆ ಸುಮ್ನೆ ಇರಬೇಕಾ.? ಅವರಿಗೆ ಬುದ್ದಿ ಕಲಿಸಬೇಕಾ ಬೇಡ್ವಾ.? ಎಂದು ಮಹದೇವಪ್ಪ ಭಾಷಣದಲ್ಲಿ ಹೇಳಿದ್ದಾರೆ.