ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರ ಬಂಧನ.! ಬೇಟೆಗಾರರ ಬಳಿ ಸಿಕ್ಕಿದ್ದೇನು ಗೊತ್ತಾ.?

ಚಾಮರಾಜನಗರ: ಹನೂರು ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರು ಬೇಟೆಗಾರರ‌ನ್ನು ಬಂಧನ ಮಾಡಲಾಗಿದೆ. ಬಂಧಿತರಿಂದ 18 ಚಿರತೆ ಉಗುರು, 8 ಹಲ್ಲುಗಳನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇನ್ನೋರ್ವ ವ್ಯಕ್ತಿ ಪರಾರಿಯಾಗಿದ್ದಾನೆ. ಜವರಯ್ಯ (52) ಕೆಂಪ (55) ತಮ್ಮಯ್ಯ (45) ಬಂಧಿತ ಆರೋಪಿಗಳು. ಬಂಧಿತರು ತಮಿಳುನಾಡು ಮೂಲದವರು ಎಂದು ತಿಳಿದುಬಂದಿದೆ.