ಆನುವಂಶೀಯ ಸಸ್ಯತಳಿ ಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಹೆಗ್ಗಾರಿನ ವೆಂಕಟ್ರಮಣ ಕಲಗಾರೆ ಇವರಿಗೆ ಪಿ.ಎಚ್.ಡಿ

ಯಲ್ಲಾಪುರ: ತಾಲೂಕಿನ ಗುಳ್ಳಾಪುರ ಸಮೀಪದ ಹೆಗ್ಗಾರಿನ ವೆಂಕಟ್ರಮಣ ಸುಬ್ರಾಯ ಕಲಗಾರೆ ಇವರಿಗೆ ತಮಿಳುನಾಡಿನ ಕೋಯಮತ್ತೂರ ಕೃಷಿ ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ ಪದವಿ ದೊರೆತಿದೆ.

ಆನುವಂಶೀಯ ಮತ್ತು ಸಸ್ಯತಳಿ ಶಾಸ್ತ್ರ ವಿಭಾಗದಲ್ಲಿ ‘ಸಜ್ಜೆಯ ಇಳುವರಿ ಮತ್ತು ಪೌಷ್ಟಿಕಾಂಶಕ್ಕಾಗಿ ಆನುವಂಶಿಕ ವಿಶ್ಲೇಷಣೆ’ ಎಂಬ ವಿಷಯದ ಕುರಿತು ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪಿ.ಎಚ್.ಡಿ ನೀಡಲಾಗಿದೆ. ಇವರಿಗೆ ಡಾ. ಎನ್. ಮೀನಾಕ್ಷಿ ಗಣೇಶನ್ ಮಾರ್ಗದರ್ಶನ ಮಾಡಿದ್ದರು. ವೆಂಕಟ್ರಮಣ ಅವರು ಹೆಗ್ಗಾರಿನ ಸುಬ್ರಾಯ ಕಲಗಾರೆ ಮತ್ತು ಪದ್ಮಾವತಿ ದಂಪತಿಯ ಪುತ್ರ.