ಗೃಹಸಚಿವರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಪೂರ್ಣೇಶ್ ಕೆಳಕೆರೆ ಮತ್ತು ಜಿಗಲಗೋಡು ವಿಶ್ವಾಸ್ ಪೊಲೀಸರ ವಶಕ್ಕೆ

ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಫೇಸ್ ಬುಕ್ ನಲ್ಲಿ ಬರೆದುಕೊಂಡ ಪೂರ್ಣೇಶ್ ಕೆಳಕೆರೆ ಮತ್ತು ಜಿಗಲಗೋಡು ವಿಶ್ವಾಸ್ ಎಂಬುವವರನ್ನ ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರಗ ಜ್ಞಾನೇಂದ್ರ ಅವರೇ ನಿಮಗೂ ಕಪ್ಪು ಬಾವುಟ, ಮೊಟ್ಟೆ ರುಚಿ ತೋರಿಸ್ತಿವಿ, ಬಿಡಲ್ಲ. ನಾಚಿಕೆ ಆಗಬೇಕು ನಿಮಗೆ, ನಿಮ್ಮ ಇಲಾಖೆಗೆ. ನನಗೆ ಯಾವ ಭಯವೂ ಇಲ್ಲ ಎಂದು ಪೂರ್ಣೇಶ್ ಕೆಳಕೆರೆ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಬರೆದುಕೊಂಡಿದ್ದರು.

ಇನ್ನು ಜಿಗಲಗೋಡು ವಿಶ್ವಾಸ್ ಕೂಡ ಗೃಹಮಂತ್ರಿ ವಿರುದ್ಧ ಮಾತನಾಡಿರುವ ಹಿನ್ನೆಲೆ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರೂ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡುವ ಪೋಸ್ಟ್ ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂಬ ಆರೋಪದ ಅಡಿ ತೀರ್ಥಹಳ್ಳಿ ಪೊಲೀಸರು  ಪ್ರಿವೆಂಟಿವ್ ಅರೆಸ್ಟ್ ಮಾಡಿದ್ದಾರೆ.