ತಡರಾತ್ರಿ ಮಳಿಗೆಯೊಂದರಲ್ಲಿ ಸಿಲಿಂಡರ್ ಬ್ಲಾಸ್ಟ್.! ಸ್ಪೋಟದ ಆರ್ಭಟಕ್ಕೆ ಅಂಗಡಿ ಛಿದ್ರ ಛಿದ್ರ.!

ಸಿದ್ದಾಪುರ: ಸಿಲಿಂಡರ್ ಸ್ಪೋಟಗೊಂಡು ಅಂಗಡಿಯೊಂದು ಸಂಪೂರ್ಣ ಛಿದ್ರಗೊಂಡ ಘಟನೆ ಸಿದ್ದಾಪುರ ತಾಲೂಕಿನ ಬೇಡ್ಕಣಿ ಬಳಿ ನಡೆದಿದೆ. ಸರ್ಕಾರಿ ಪ್ರಥಮ‌ದರ್ಜೆ ಕಾಲೇಜಿನ ಬಳಿ ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಶುಕ್ರವಾರ ತಡರಾತ್ರಿ ಸಿಲೆಂಡರ್ ಸ್ಪೋಟಗೊಂಡು ಅಂಗಡಿ ಸಂಪೂರ್ಣ ನಾಶವಾಗಿದೆ.

ಶರಾವತಿ ಶ್ರೀಧರ ನಾಯ್ಕ ಎಂಬುವರಿಗೆ ಸೇರಿದ ಅಂಗಡಿ ಇದಾಗಿದ್ದು, ಘಟನೆಯಿಂದಾಗಿ ಅಂಗಡಿ ಮೇಲ್ಚಾವಣಿ ಸಹಿತ ಎಲ್ಲಾ ವಸ್ತುಗಳು ನಾಶವಾಗಿವೆ. ಸ್ಪೋಟದ ಆರ್ಭಟಕ್ಕೆ ಅಂಗಡಿಯ ತಗಡು ಹಾಗೂ ಮತ್ತಿತರ ವಸ್ತುಗಳು ಛಿದ್ರ ಛಿದ್ರವಾಗಿದ್ದು, ಘಟನೆಗೆ ಕಾರಣ ಏನು ಎಂದು ತಿಳಿಯಲಾಗುತ್ತಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಲು ಅಂಗಡಿಯಲ್ಲಿ ಕರೆಂಟ್ ಸಂಪರ್ಕ ಕೂಡ ಇಲ್ಲ. ಆದರೂ ಸಿಲೆಂಡರ್ ಸ್ಪೋಟಗೊಂಡಿದ್ದರ ಹಿಂದೆ ಸಾಕಷ್ಟು ಅನುಮಾನ ಕಾಡುತ್ತಿವೆ.