ಖ್ಯಾತ ಶಸ್ತ್ರ ಚಿಕಿತ್ಸಕ ಡಾ. ಅರುಣ್‌ಕುಮಾರ್ ಅವರಿಗೆ ಸನ್ಮಾನ

ಭಟ್ಕಳ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಟ್ಕಳ ಸಾರ್ವಜನಿಕರ ವೇದಿಕೆ ಅಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೇರಿ ಭಟ್ಕಳ ಸರಕಾರಿ ಆಸ್ಪತ್ರೆಯ ಖ್ಯಾತ ಶಸ್ತ್ರ ಚಿಕಿತ್ಸಕ ಡಾ. ಅರುಣ್‌ಕುಮಾರ ರವರನ್ನು ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಗೌರವಿಸಿ ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕರ ವೇದಿಕೆಯ ಅಧ್ಯಕ್ಷ ಹಾಗೂ ಭಟ್ಕಳ ಅರ್ಬನ್ ಬ್ಯಾಂಕಿನ ನಿರ್ದೇಶಕ ಶ್ರೀಧರ ನಾಯ್ಕ ಈ ಸಂದರ್ಭದಲ್ಲಿ ಮಾತನಾಡಿ ಸಾರ್ವಜನಿಕರಿಗೆ ಅದರಲ್ಲೂ ಬಡವರಿಗೆ ಸಮಯದ ಮಿತಿಯಿಲ್ಲದೇ ಬಡವರ ಸೇವೆಗೈಯ್ಯುತ್ತಿರುವ ಭಟ್ಕಳದ ಸರಕಾರ ಆಸ್ಪತ್ರೆಯ ವೈದ್ಯ ಡಾ. ಅರುಣ್ ಕುಮಾರ ರವರ ಸೇವೆ ಅಸಾಮಾನ್ಯವಾದ್ದು. ಅವರು ನಿರ್ಗತಿಕ ಬಡ ರೋಗಿಗಳಿಗೆ ವೇಳೆಯ ಇತಿಮಿತಿಯಿಲ್ಲದೇ ತನ್ನ ಕೈಯಿಂದ ಹಣವನ್ನು ವ್ಯಯಿಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಬಡ ರೋಗಿಗಳು ಈ ವೈದ್ಯರನ್ನು ದೇವರಂತೆ ಕಾಣುತ್ತಿದ್ದು ಭಟ್ಕಳದ ಪ್ರತಿ ಸಾರ್ವಜನಿಕರ ಮನದಲ್ಲಿ ಈ ವೈದ್ಯರು ಹೆಸರುವಾಸಿಯಾಗಿದ್ದಾರೆ. ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸುತ್ತಿರುವು ಭಟ್ಕಳದ ಸಾರ್ವಜನಿಕರ ಭಾಗ್ಯವಾಗಿದೆ ಇಂತಹ ವೈದ್ಯರನ್ನು ಭಟ್ಕಳದಲ್ಲಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಅರುಣ್ ಕುಮಾರ ನಾನು ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ್ದೇವೆ ಹೊರತು ಇದರಲ್ಲಿ ಯವುದೇ ವಿಶೇಷತೆಯಿಲ್ಲ. ಸನ್ಮಾನ ಮಾಡಿದ ಎಲ್ಲ ಸಾರ್ವಜನಿಕರಿಗೆ ನಾನು ಕೃತಜ್ಞನಾಗಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ನಜೀರ ಕಾಶೀಂ, ಭಟ್ಕಳ ಜೆ.ಸಿ.ಐ. ಅಧ್ಯಕ್ಷ ಪಾಂಡುರಂಗ ನಾಯ್ಕ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ, ಕ್ರೀಯಾಶೀಲ ಗೆಳೆಯರ ಸಂಘದ ಅದ್ಯಕ್ಷ ದೀಪಕ್ ನಾಯ್ಕ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.