ಮೈದಾನದಲ್ಲಿ ಗೋ ಮಾಂಸ ಎಸೆದ ಕಿಡಿಗೇಡಿಗಳು: ಹಿಂದೂಗಳ ಭಾವನೆಗೆ ಧಕ್ಕೆ: ತೀವ್ರ ಆಕ್ರೋಶ

ಕಾರವಾರ: ತಾಲೂಕಿನ ಮಲ್ಲಾಪುರದ ಕಾಳಿಕಾ ಮೈದಾನದಲ್ಲಿ ಗೋ ಮಾಂಸ ಹಾಗೂ ಅವಶೇಷಗಳನ್ನು ಎಸೆದಿರುವ ಘಟನೆ ನಡೆದಿದ್ದು, ಈ ಬಗ್ಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕೃತ್ಯದಿಂದಾಗಿ ಹಿಂದೂಗಳ ಭಾವನೆಗೆ ಧಕ್ಕೆಯಾಗಿದ್ದು, ಈ ಕೆಲಸ ಮಾಡಿದವರನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಆಗ್ರಹಿಸಿ ಹಿಂದೂ ಸಮುದಾಯದವರು ಪೊಲೀಸರಿಗೆ ಮನವಿಯನ್ನೂ ನೀಡಿದ್ದಾರೆ.

ಹಿಂದುಗಳು ಗೋವನ್ನು ಪೂಜಿಸಿ ಅದರಲ್ಲಿ ದೇವರನ್ನು ಕಾಣುತ್ತಾರೆ. ಆದರೆ ಮಲ್ಲಾಪುರದ ಹಿಂದುವಾಡಾದ ಕಾಳಿಕಾದೇವಿಯ ಮೈದಾನದಲ್ಲಿ ಗೋವಿನ ಶಿರ, ಕಾಲುಗಳನ್ನು ಗೋಣಿ ಚೀಲದಲ್ಲಿ ತುಂಬಿ ಎಸೆದು ಅಪರಾಧ ಮಾಡಿದ್ದಾರೆ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು. ತಪ್ಪಿತಸ್ಥರನ್ನು ಶೀಘ್ರದಲ್ಲೆ ಹಿಡಿದು ಕಠಿಣ ಶಿಕ್ಷೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಆಟವಾಡಲು ಇದೇ ಮೈದಾನವನ್ನು ಇಲ್ಲಿನ ಮಕ್ಕಳು, ಯುವಕರು ಬಳಸುತ್ತಿದ್ದು, ಈ ಘಟನೆಯಿಂದ ತೀವ್ರ ನೊಂದಿದ್ದಾರೆ. ಆದ್ದರಿಂದ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಕ್ರಮ ವಹಿಸಬೇಕು ಎಂದು ಹಿಂದು ಮುಖಂಡರು ಆಗ್ರಹಿಸಿದ್ದಾರೆ.