ಮೃತ ಫಾಜೀಲ್ ಮನೆಗೂ ಭೇಟಿ ಕೊಡ್ತೇನೆ – ಸಿಎಂ

ಭಟ್ಕಳ: ಮುಟ್ಟಳ್ಳಿಯಲ್ಲಿ ಭೂ ಕುಸಿತದಿಂದ ಹಾನಿಯಾಗಿ ಸಾವುಕಂಡ ಕುಟುಂಬಸ್ತರಿಗೆ ಸರಕಾರದಿಂದ ಪರಿಹಾರ ಮಾತ್ರವಲ್ಲ ಅವರ ಮಕ್ಕಳ ಪಿ.ಜಿ ಶಿಕ್ಷಣ ನೋಡಿಕೊಳ್ಳುತ್ತೇವೆ, ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡುವ ಕೆಲಸ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

ಮುಟ್ಟಳ್ಳಿ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳೊಂದಿಗೆ ಮಾತನಾಡಿ ಸಿದ್ದರಾಮಯ್ಯ ನವರಿಗೆ ೭೫ ನೇ ಹುಟ್ಟು ಹಬ್ಬ ವೈಯಕ್ತಿಕವಾಗಿ ಶುಭಾಶಯ ಕೋರುತ್ತೇನೆ. ೭೫ ವರ್ಷ ತುಂಬಿದ್ದಕ್ಕೆ ನಮಗೂ ಸಂತೋಷವಿದೆ. ಈ‌ ಸಂದರ್ಭದಲ್ಲಿ ಹುಟ್ಟು ಹಬ್ಬ ಅದ್ದೂರಿಯಾಗಿ ಆಚರಿಸಿದ್ದಕ್ಕೆ ಅವರೇ ಉತ್ತರ ಕೊಡಬೇಕು ಎಂದರು

ಮೃತ ಫಾಜೀಲ್ ಮನೆಗೂ ಭೇಟಿ ಕೊಡ್ತೇನೆ. ಸರ್ಕಾರ ಹಿಂದೂ ಮುಸ್ಲಿಂ ಅಂತಾ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲಿ ಅವರ ಮನೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.