ಆಟೋರಿಕ್ಷಾ ನಿಲ್ದಾಣ ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಿದ ದಲಿತ ಮುಖಂಡ

ಮುಂಡಗೋಡ: ಪಟ್ಟಣದಲ್ಲಿ ಆಟೋರಿಕ್ಷಾ ನಿಲ್ದಾಣವನ್ನು ಕಲ್ಪಿಸಿಕೊಡಬೇಕು ಎಂದು ದಲಿತ ಮುಖಂಡ ಚಿದಾನಂದ ಹರಿಜನ ನೇತೃತ್ವದಲ್ಲಿ ಬುಧವಾರ ಸಿಪಿಐ ಎಸ್ ಸಿಮಾನಿ ಅವರಿಗೆ ಮನವಿ ಸಲ್ಲಿಸಿದರು.

ಮುಂಡಗೋಡ ಪಟ್ಟಣದಲ್ಲಿ ಚಾಲಕರು ತಮ್ಮ ಆಟೋ ಚಲಾಯಿಸಿಕೊಂಡು ಕುಟುಂಬಗಳ ನಿರ್ವಹಣೆ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಈಗಾಗಲೇ ಮೂರು ಆಟೋ ನಿಲ್ದಾಣದ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಆಟೋ ಚಾಲಕರ ಸಂಘದವರು ಬಿಟ್ಟು ಬೇರೆ ಆಟೋಗಳನ್ನು ಚಲಾಯಿಸಲು ಅವಕಾಶ ನೀಡಿದೆ ದಿನ ನಿತ್ಯ ತಕರಾರು ಮಾಡುತ್ತ ಬರುತ್ತಿರುವುದರಿಂದ 10 ಆಟೋ ಚಾಲಕರ ದುಡಿಮೆ ಕಡಿಮೆಯಾಗಿ ಕುಟುಂಬದ ಸದಸ್ಯರು ಉಪವಾಸ ಬೀಳುವ ಪ್ರಸಂಗ ಉಂಟಾಗುತ್ತಿದೆ. ಆದ್ದರಿಂದ ಈ ಮನವಿಯಲ್ಲಿರುವ ಆಟೋ ಚಾಲಕರಿಗೆ ಆಟೋ ನಿಲ್ದಾಣದಲ್ಲಿ ಅವರ ಆಟೋವನ್ನು ನಿಲ್ಲಿಸಿ ಪ್ರಯಾಣಿಕರನ್ನು ಸಂಚಾರ ಮಾಡಲು ಅವಕಾಶ ಮಾಡಿಕೊಡಬೇಕು. ಇಲ್ಲವೆ ಹೊಸ ನಿಲ್ದಾಣದ ಸ್ಥಳವನ್ನು ಗುರುತಿಸಿಕೊಡುವಂತೆ ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.