ಪರಿಹಾರದ ಆದೇಶ ಪ್ರತಿ ಹಸ್ತಾಂತರಿಸಿದ ಶಾಸಕ ಸುನೀಲ್ ನಾಯ್ಕ್

ಭಟ್ಕಳ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡ ಮುಂಡಳ್ಳಿಯ 4 ಕುಟುಂಬದವರಿಗೆ ಶಾಸಕ ಸುನೀಲ್ ನಾಯ್ಕ ಪರಿಹಾರದ ಆದೇಶ ಪ್ರತಿ ಹಸ್ತಾಂತರಿಸಿದರು.

ನೆರೆ ಹಾವಳಿಯಿಂದಾಗಿ ತಾಲೂಕಿನಲ್ಲಿ ರಸ್ತೆ, ಸೇತುವೆ, ಮನೆಗಳಿಗೆ ಅಪಾರ ಹಾನಿಯಾಗಿದ್ದು, ಹಾನಿಗೊಳಗಾದವರಿಗೆ ಪರಿಹಾರ ಒದಗಿಸಲು ಖುದ್ದು ಮನೆಗಳಿಗೆ ಅಧಿಕಾರಿಗಳೊಂದಿಗೆ ಶಾಸಕರು ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ನೆರೆಹಾವಳಿಗೆ ತುತ್ತಾಗಿ ಮನೆ ಕಳೆದುಕೊಂಡ 4 ಕುಟುಂಬದವರಿಗೆ  ಪರಿಹಾರವನ್ನು ಒದಗಿಸಲಾಗಿದೆ. ನೂತ‌ನ ಮನೆ ನಿರ್ಮಾಣಕ್ಕೆ ತಲಾ 5 ಲಕ್ಷ ಸಹಾಯಧನದ ಮೂದಲ ಕಂತಿನ (95,100 ರೂಪಾಯಿ) ಆದೇಶ ಪ್ರತಿ ನೀಡಿದರು.