ಕಾರು ಚಾಲಕನ ಗಮನ ಬೇರೆಡೆ ಸೆಳೆದು 18 ಲಕ್ಷ ರೂ ಎಗರಿಸಿದ ಚಾಲಾಕಿ ಚೋರರು.!

ವಿಜಯಪುರ: ಕಾರು ಚಾಲಕನ ಗಮನ ಬೇರೆಡೆ ಸೆಳದು 18 ಲಕ್ಷ ಕಳ್ಳತನ ಮಾಡಿರುವ ಘಟನೆ ಚಡಚಣ ಪಟ್ಟಣದ ಕರ್ನಾಟಕ ಬ್ಯಾಂಕ್ ಬಳಿ ನಡೆದಿದೆ. ಚಡಚಣ ತಾಲೂಕಿನ ಲೋಣಿ ಬಿ ಕೆ ಗ್ರಾಮದ ವ್ಯಾಪಾರಿ ಸಿದ್ದಾರಾಮ ಕಾಪ್ಸೆ ಹಣ ಕಳೆದುಕೊಂಡ ವ್ಯಕ್ತಿ. ಪಟ್ಟಣದ ಕರ್ನಾಟಕ ಬ್ಯಾಂಕ್ ನಿಂದ 18 ಲಕ್ಷ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿಟ್ಟಿದ್ದ ವೇಳೆ ಕಾರಿನ ಮುಂಭಾಗದ ಮೇಲೆ ಆಯಿಲ್ ಹಾಕಿ ಚಾಲಾಕಿ ಖದೀಮರು ಬೇರೆಡೆ ಗಮನ ಸೆಳೆದಿದ್ದಾರೆ.

ಚಾಲಕ ಕಾರಿನ ಮುಂಬಾಗದತ್ತ ನೋಡುವಾಗ ಕಾರಿನಲ್ಲಿದ್ದ ಹಣದ ಬ್ಯಾಗ್ ಎಗರಿಸಿ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಘಟನೆ ವೇಳೆ ಹಣದ ಮಾಲಿಕ ಸಿದ್ದರಾಮ ಬ್ಯಾಂಕ್ ನೊಳಗೆ ಇದ್ದರು ಎಂದು ತಿಳಿದುಬಂದಿದೆ.

ಬೈಕ್ ಮೇಲೆ ಬಂದಿದ್ದ ಮೂವರಿಂದ ಈ ಕೃತ್ಯ ನಡೆದಿದೆ. ಸ್ಥಳಕ್ಕೆ ಚಡಚಣ ಪೊಲೀರು ಭೇಟಿ ನೀಡಿ ಪರಿಶೀಲಿಸಿದ್ದು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.