‘ಇದು ಕೇವಲ ಸ್ಯಾಂಪಲ್ ಪೈರಿಂಗ್, ಮುಂದೆ ಇನ್ನೂ ಇದೆ’ – ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಪ್ರೇಮ್ ಸಿಂಗ್ ಭೇಟಿ ನಂತರ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಕೃತ್ಯ ಮಾಡಿದವರಿಗೆ ಕಾಲಿಗೆ ಗುಂಡೇಟು ಹಾಕಿ ಒಳಗೆ ಕೂರಿಸಿದ್ದಾರೆ.‌ ಇದು ಕೇವಲ ಸ್ಯಾಂಪಲ್ ಪೈರಿಂಗ್ ಮಾತ್ರ ಮುಂದೆ ಇನ್ನು ಇದೆ ಎಂದು ಕೆ ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

ಭಾರತಿ ಜನತಾಪಾರ್ಟಿಯ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಂತೋಷ್ ಜೀ ರಾಘವೇಂದ್ರ ಜೊತೆ ಬಂದು ಭೇಟಿ ನೀಡಿದ್ದೇನೆ. ಪ್ರೇಮ್ ಸಿಂಗ್ ಚೇತರಿಕೆ ಆಗುತ್ತಿದ್ದಾನೆ. ಆರೋಪಿಗಳ ಆಸ್ತಿ ಮುಟ್ಟುಗೋಲು ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.