ದುಡ್ಡಿನ ವಿಚಾರದಲ್ಲಿ ಗಲಾಟೆ: ಮಾಲಿಕನಿಂದ ಕೂಲಿ ಕೆಲಸದವನ ಮೇಲೆ ಮಾರಣಾಂತಿಕ ಹಲ್ಲೆ

ಕುಮಟಾ: ಕೆಲಸ ಮಾಡಿಸಿಕೊಂಡು ದುಡ್ಡು ಕೊಡುವ ಸಮಯದಲ್ಲಿ ಗಲಾಟೆ ನಡೆದಿದ್ದು ಮಾಲಿಕ ಕೂಲಿ ಕೆಲಸದವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಮಂಗಳವಾರ ನಡೆದಿದೆ. ಬೇಲೆಹಿತ್ತಲ ಮೂಲದ ವ್ಯಕ್ತಿ ನಾಗಪ್ಪ ಗೌಡ ಗಾಯಗೊಂಡ ವ್ಯಕ್ತಿ.

ಸಚಿನ್ ನಾಡಕರ್ಣಿ ಎನ್ನುವ ವ್ಯಕ್ತಿಯ ಮನೆಯಲ್ಲಿ ಪೇಂಟಿಂಗ ಕೆಲಸ ಮುಗಿಸಿ ಕೂಲಿ ಹಣ ಕೇಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಆಗ ಮಾಲಿಕ ರಾಡಿನಿಂದ ತಲೆಗೆ ಹಾಗೂ ಕಾಲಿಗೆ ಹೊಡೆದಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ನಾಗಪ್ಪ ಗಂಭೀರ ಗಾಯಗೊಂಡಿದ್ದಾನೆ. ಕೂಡಲೇ ಗಾಯಾಳುವನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಮಗಾದ ಅನ್ಯಾಯಕ್ಕೆ ಗೋಕರ್ಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.