ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ವಕೀಲ ಅಶೋಕ್ ಪಾಂಡೆ ಅವರಿಗೆ ಆರು ತಿಂಗಳ ಜೈಲು(Jail) ಶಿಕ್ಷೆ ವಿಧಿಸಿದೆ. ಅವರು ವಕೀಲರ ಉಡುಪನ್ನು ಧರಿಸದೆ ಮತ್ತು ಶರ್ಟ್ ಗುಂಡಿಗಳನ್ನು ತೆಗೆದು ನ್ಯಾಯಾಲಯಕ್ಕೆ ಬಂದಿದ್ದ. ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ಬಿ.ಆರ್. ಸಿಂಗ್ ಅವರ ವಿಭಾಗೀಯ ಪೀಠವು ಗುರುವಾರ ಪಾಂಡೆ ವರ್ತನೆಗೆ ಕೋಪಗೊಂಡು ಶಿಕ್ಷೆಯನ್ನು ಘೋಷಿಸಿದ್ದಾರೆ. 2,000 ರೂ. ದಂಡವನ್ನೂ ವಿಧಿಸಿದ ನ್ಯಾಯಪೀಠ, ತಪ್ಪಿದಲ್ಲಿ ಒಂದು ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದೆ

ಅಲಹಾಬಾದ್ : 2021 ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ವಕೀಲ ಅಶೋಕ್ ಪಾಂಡೆ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅವರು ವಕೀಲರ ಉಡುಪನ್ನು ಧರಿಸದೆ ಮತ್ತು ಶರ್ಟ್ ಗುಂಡಿಗಳನ್ನು ತೆಗೆದು ನ್ಯಾಯಾಲಯಕ್ಕೆ ಬಂದಿದ್ದ. ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ಬಿ.ಆರ್. ಸಿಂಗ್ ಅವರ ವಿಭಾಗೀಯ ಪೀಠವು ಗುರುವಾರ ಪಾಂಡೆ ವರ್ತನೆಗೆ ಕೋಪಗೊಂಡು ಶಿಕ್ಷೆಯನ್ನು ಘೋಷಿಸಿದ್ದಾರೆ. 2,000 ರೂ. ದಂಡವನ್ನೂ ವಿಧಿಸಿದ ನ್ಯಾಯಪೀಠ, ತಪ್ಪಿದಲ್ಲಿ ಒಂದು ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದೆ.
ವಕೀಲ ಅಶೋಕ್ ಪಾಂಡೆ ಅವರಿಗೆ ಲಕ್ನೋದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ. ಪಾಂಡೆ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ ಪೀಠ, ಅಲಹಾಬಾದ್ ಹೈಕೋರ್ಟ್ ಮತ್ತು ಅದರ ಲಕ್ನೋ ಪೀಠದಲ್ಲಿ ವಕೀಲಿ ವೃತ್ತಿ ಮಾಡುವುದನ್ನು ಏಕೆ ನಿರ್ಬಂಧಿಸಬಾರದು ಎಂದು ಕೇಳಿದೆ. ಅವರು ಮೇ 1 ರೊಳಗೆ ಪ್ರತಿಕ್ರಿಯಿಸಬೇಕು. ಆಗಸ್ಟ್ 18, 2021 ರಂದು ಪಾಂಡೆ ನ್ಯಾಯಾಲಯಕ್ಕೆ ವಕೀಲರ ಉಡುಪಿನಲ್ಲಿ ಬಾರದೆ, ಗುಂಡಾಗಳ ರೀತಿಯಲ್ಲಿ ಶರ್ಟ್ನ ಗುಂಡಿಗಳನ್ನು ತೆಗೆದುಕೊಂಡು ಬಂದಿದ್ದರು.
ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ವಕೀಲ ಅಶೋಕ್ ಪಾಂಡೆ ನ್ಯಾಯಮೂರ್ತಿಗಳನ್ನು ‘ಗೂಂಡಾಗಳು’ ಎಂದು ಕರೆದಿದ್ದರು. ನ್ಯಾಯಮೂರ್ತಿ ವಿವೇಕ್ ಚೌಧರಿ ಮತ್ತು ನ್ಯಾಯಮೂರ್ತಿ ಬ್ರಿಜ್ ರಾಜ್ ಸಿಂಗ್ ಅವರ ಪೀಠವು ವಕೀಲ ಪಾಂಡೆ ಅವರನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆಗಾಗಿ ತಪ್ಪಿತಸ್ಥರೆಂದು ಘೋಷಿಸಿತು.
2003 ರಿಂದ 2017 ರ ನಡುವೆ ಅವರು ಈ ರೀತಿ ನಡೆದುಕೊಂಡಿರುವ ಬಗ್ಗೆ ಹಲವು ವರದಿಗಳಿವೆ. ಇಂತಹ ಪುನರಾವರ್ತಿತ ದುಷ್ಕೃತ್ಯಗಳು ಪಾಂಡೆ ದಾರಿ ತಪ್ಪುತ್ತಿದ್ದಾರೆ ಮಾತ್ರವಲ್ಲದೆ ನ್ಯಾಯಾಲಯದ ಅಧಿಕಾರವನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸುತ್ತಿದ್ದಾರೆ ಎಂದು ಹೇಳಿದೆ. ನ್ಯಾಯಾಲಯದ ಆದೇಶಗಳನ್ನು ಪಾಲಿಸುತ್ತಿಲ್ಲ, ಯಾವುದೇ ಸುಧಾರಣೆಯಾಗಿಲ್ಲ, ಅವರು ತನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಆಗಸ್ಟ್ 18, 2021 ರಂದು, ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ಪಾಂಡೆ ಅವರು ಇರಬೇಕಾದ ಉಡುಪಿನಲ್ಲಿ ಬೆಂಚ್ ಮುಂದೆ ಇರಲಿಲ್ಲ. ಅವನು ಸಮವಸ್ತ್ರದ ಬದಲು ಸಿವಿಲ್ ಡ್ರೆಸ್ನಲ್ಲಿದ್ದರು. ಶರ್ಟ್ನ ಗುಂಡಿಗಳು ಕೂಡ ತೆಗೆದಿದ್ದರು, ಹೀಗಾಗಿ ಸಮವಸ್ತ್ರದಲ್ಲಿ ಬರುವಂತೆ ಸೂಚಿಸಲಾಗಿತ್ತು.