ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಚೌಕ್‌ನಲ್ಲಿ ಧ್ವಜಾರೋಹಣ

ಕುಮಟಾ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ರಥಬೀದಿಯಲ್ಲಿರುವ ಗಾಂಧಿ ಚೌಕ್‌ನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸ್ವಾತಂತ್ರ್ಯೋತ್ಸವದ ಶುಭ ಸಂದೇಶ ನೀಡಿದ ವಿ.ಎಲ್.ನಾಯ್ಕ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು, ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಶ್ರಮಿಸಿದವರನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಪಂ ನಿಕಟಪೂರ್ವ ಸದಸ್ಯ ರತ್ನಾಕರ ನಾಯ್ಕ, ಪುರಸಭೆ ಸದಸ್ಯರಾದ ಎಂ.ಟಿ.ನಾಯ್ಕ, ವಿನಯಾ ಜಾರ್ಜ್, ಕಾಂಗ್ರೆಸ್ ಮುಖಂಡರಾದ ನಾಗೇಶ್ ನಾಯ್ಕ, ರವಿಕುಮಾರ್ ಶೆಟ್ಟಿ, ಮಧುಸೂದನ್ ಶೇಟ್, ಸುರೇಖಾ ವಾರೇಕರ್, ಶಶಿಕಾಂತ ನಾಯ್ಕ, ಲಕ್ಷ್ಮೀ ಚಂದಾವರ, ಜಗದೀಶ್ ಹರಿಕಂತ್ರ , ದೀಪಾ ನಾಯ್ಕ, ವಿನು ಜಾರ್ಜ್ ಇತರರು ಇದ್ದರು.