ಸರಳಗಿಯ ಕದಂಬ ಸೈನ್ಯದಿಂದ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ

ಹೊನ್ನಾವರ : ತಾಲೂಕಿನ ಸರಳಗಿಯ ಕದಂಬ ಸೈನ್ಯದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯುತು. ಬೆಳಿಗ್ಗೆ 8 ಘಟೆಗೆ ಸಂಘದ ಘಟಖ ಅಧ್ಯಕ್ಷರಾದ ನಾರಾಯಣ ಉಪ್ಪಾರ ಧ್ವಜರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪದಾದಿಕಾರಿಗಳಾದ ಕಾರ್ಯದರ್ಶಿ ಲೊಕೇಶ ಉಪ್ಪಾರ ಜಿಲ್ಲಾ ಸಂಚಾಲಕರಾದ ಪುರಂದರ ನಾಯ್ಕ ಪದಾದಿಕಾರಿಗಳಾದ ಗಣಪತಿ ನಾಯ್ಕ ಸುಬ್ರಾಯ ಉಪ್ಪಾರ ಗಣಪತಿ ಉಪ್ಪಾರ ಮುಕುಂದ ಉಪ್ಪಾರ ರಮೇಶ ಉಪ್ಪಾರ ಹೊನ್ನಪ್ಪ ನಾಯ್ಕ ರಾಮಚಂದ್ರ ಉಪ್ಪಾರ, ಅತಿಸ ನಿರ್ಮಲ ಕುಮಾರ ಹಾಗೂ ಎಲ್ಲಾ ಸದಸ್ಯರುಗಳು ಹಾಗೂ ಹಿರಿಯ ಪ್ರಾರ್ಥಮಿಕ ಶಾಲೆ ಸರಳಗಿಯ ವಿಧ್ಯಾರ್ಥಿಗಳು ಶಿಕ್ಷಕವೃಂದದವರು ಮತ್ತು ಪಂಚಾಯತ ಉಪಾಧ್ಯಕ್ಷರು ಊರನಾಗರಿಕರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೆರಿಸಲಾಯಿತು. ನಂತರ ತಾಯಿ ಭಾರತ ಮಾತೆಗೆ ಜೈಕಾರ ಹಾಕುತ್ತಾ ಪ್ರಭಾತ ಪೇರಿ ಮೂಲಕ ಊರ ಪ್ರಮುಖ ಬೀದಿಯಲ್ಲಿ ಪಥಸಂಚಲನ ನಡೆಸಲ್ಲಾಯಿತು ನಂತರ ಸಿಹಿ ಹಂಚಿ ಸಂಭ್ರಮಿಸಲಾಯಿತು.