ಬೈಕ್ ಹಿಂಬದಿ ಡಿಕ್ಕಿ ಹೊಡೆದ ಕಾರು: ಬೈಕ್ ಸವಾರ ಸ್ಥಳದಲ್ಲೇ ಸಾವು

ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕಾರೊಂದು, ಬೈಕ್‌ಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದು ಅಫಘಾತಪಡಿಸಿದ ಪರಿಣಾಮ, ಬೈಕ್‌ನ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಅವರ್ಸಾದ ಸಕಲಬೇಣದ ಬಳಿ ಬುಧವಾರ ನಡೆದಿದೆ.

ಗಾಬಿತವಾಡಾ ಕೇಣಿಯ ಸಚೀನ್ ಕೃಷ್ಣ ಕುರ್ಲೆ (17) ಮೃತ ದುರ್ದೈವಿ. ಮೃತನ ತಂದೆ ಬೈಕ್‌ನ ಸವಾರ ಕೃಷ್ಣ ಸೈರು ಕುರ್ಲೆ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.

ಕಾರವಾರದಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಅಂಕೋಲಾ ಕಡೆಗೆ ಸಾಗುತ್ತಿದ್ದ ಬೈಕ್ ನ ಹಿಂಬದಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತವಾದ ರಭಸಕ್ಕೆ ಬೈಕ್ ಸಿಡಿದು ಬಿದ್ದಿದ್ದರೆ, ಕಾರು ಪಲ್ಟಿಯಾಗಿ ರಸ್ತೆಯಂಚಿನ ಕಂದಕಕ್ಕೆ ಉರುಳಿ ಬಿದ್ದಿದೆ. ಕಾರು ಚಾಲಕ ಸುಲೇಮಾನ್ ಇಕ್ಬಾಲ್ ಅಹಮ್ಮದ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪಿಎಸೈ ಪ್ರವೀಣಕುಮಾರ ಹಾಗೂ ಮಹಾಂತೇಶ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.