ಹೊನ್ನಾವರ ತಾಲೂಕ ಛಾಯಾಗ್ರಾಹಕ ಸಂಘದ ವತಿಯಿಂದ ದಿ. ಮಂಜು ಆಚಾರಿಯವರ ಶ್ರಧ್ಧಾಂಜಲಿ ಸಭೆ

ಹೊನ್ನಾವರ ತಾಲೂಕ ಛಾಯಾಗ್ರಾಹಕ ಸಂಘದ ವತಿಯಿಂದ ಮೂಡಗಣಪತಿ ಕಲ್ಯಾಣ ಮಂಟಪದಲ್ಲಿ ಕೆಲದಿನಗಳ ಹಿಂದೆ ನಮ್ಮನ್ನಗಲಿದ ಹಿರಿಯ ಛಾಯಾಗ್ರಾಹಕರು ಹಾಗು ಹೊನ್ನಾವರ ಛಾಯಾಗ್ರಾಹಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ದಿ. ಮಂಜು ಆಚಾರಿಯವರ ಶ್ರಧ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು.

ಸಭೆಯಲ್ಲಿ ನೆರೆದಿದ್ದ ಸರ್ವ ಸದಸ್ಯರು ದಿ. ಮಂಜು ಆಚಾರಿಯವರ ಆತ್ಮಕ್ಕೆ ಶಾಂತಿಯನ್ನು ಕೋರಿ 1 ನಿಮಿಷಗಳ ಕಾಲ ಮೌನಾಚರಣೆಯನ್ನು ಮಾಡಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಸುರೇಶ ಹೊನ್ನಾವರರವರು ಮಾತನಾಡಿ ಸಂಘದ ಪ್ರಥಮ ಅಧ್ಯಕ್ಷರಾಗಿ ತಮ್ಮ ಸಲಹೆ ಸೂಚನೆಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಲಾಯನ್ಸ ಕ್ಲಬ್ ಸದಸ್ಯರಾಗಿ ಹಾಗು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದನ್ನು ನೆನಪಿಸಿಕೊಂಡರು.

ಇನ್ನು ಸಂಘದ ಸದಸ್ಯರು ಸೇರಿ ಸುಮಾರು 50,000 ರೂಪಾಯಿಗಳನ್ನು ಒಟ್ಟುಗೂಡಿಸಿ ದಿ. ಮಂಜು ಆಚಾರಿಯವರ ಧರ್ಮಪತ್ನಿಯವರಿಗೆ ಚೆಕ್ ಹಸ್ತಾಂತರಿಸಲಾಯಿತು.

ಈ ಸಂಧರ್ಭದಲ್ಲಿ ಸಂಘಟಣಾ ಕಾರ್ಯದಶಿ೯ಯಾದ ಎನ್.ಗಣಪತಿ, ಪಿ.ಕೆ. ಹೆಗ್ಡೆ, ಲಕ್ಷ್ಮೀಶ ಭಂಡಾರಿ, ಶ್ರೀಪಾದ ನಾಯ್ಕ, ರಾಘವ ಮೇಸ್ತಾ, ಈಶ್ವರ ಹರಿಕಾಂತ ,ಸುಭಾಶ ನಾಯ್ಕ, ಮಂಜುನಾಥ ನಾಯ್ಕ, ಗಣೇಶ ಶೆಟ್ಟಿ, ವಿಕ್ರಂ , ನಾಗೇಶ ಶೆಟ್ಟಿ, ಆರ್. ಕೆ.ಮೇಸ್ತ ,ರವಿ ಹೆಗಡೆ,ವಿನಾಯಕ ನಾಯ್ಕ, ನಾಗರಾಜ ಹಾಗೂ ಸರ್ವ ಸದಸ್ಯರು ಹಾಜರಿದ್ದರು