ಪದ್ಮಶ್ರೀ ಪುರಸ್ಕೃತೆ ಸುಕ್ರಿ ಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದ ವಿಶ್ವೇಶ್ವರ ಹೆಗಡೆ ಕಾಗೇರಿ

ಬಿಜೆಪಿ ಲೋಕಸಭಾ ಅಭ್ಯರ್ಥಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಂಕೋಲಾದ ಜಾನಪದ ಕೋಗಿಲೆ ಪದ್ಮಶ್ರೀ ಪುರಸ್ಕೃತೆ ಶ್ರೀಮತಿ ಸುಕ್ರಿ ಬೊಮ್ಮು ಗೌಡರವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಆರೋಗ್ಯವಿಚಾರಿಸಿ ಅವರನ್ನು ಸತ್ಕರಿಸಿ ಆಶೀರ್ವಾದ ಪಡೆದ್ರು..


ಸುಕ್ರಿ ಬೊಮ್ಮು ಗೌಡ ಕಾಗೇರಿಯವರ ತಲೆ ಮೇಲೆ ಕೈ ಇಟ್ಟು ಗೌರವಿಸಿ ಆತ್ಮೀಯವಾಗಿ ಶುಭ ಹಾರೈಸಿ ಆಶೀರ್ವದಿಸಿದರು..ಕಾಗೇರಿಯವರು ಸುಕ್ರಿ ಬೊಮ್ಮು ಗೌಡರಿಗೆ ಶಾಲು ಹೊದೆಸಿ ಸನ್ಮಾನಿಸಿ ಅವರ ಜೊತೆ ಕುಳಿತು ಸ್ವಲ್ಪ ಸಮಯ ಮಾತು ಕತೆ ನಡೆಸಿದ್ರು…



ಈ ವೇಳೆ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಪ್ರಭಾರಿ ಸುಬ್ರಾಯ ದೇವಾಡಿಗ, ಭಾಸ್ಕರ ನಾರ್ವೆಕರ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.