ಭಟ್ಕಳ : ಒಂಟೆಗಳನ್ನ ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ ವೇಳೆ ದಾಳಿ ನಡೆಸಿದ ಪೊಲೀಸರು

ಭಟ್ಕಳ: ಅಕ್ರಮವಾಗಿ ನೀರು ಮೇವು ಕೊಡದೆ ಹಿಂಸಾತ್ಮಕವಾಗಿ ಒಂಟೆ ಕಟ್ಟಿ ಹಾಕಿದ್ದ ವೇಳೆ ದಾಳಿ ನಡೆಸಿದ ಪೊಲೀಸರು 5 ಒಂಟೆಗಳನ್ನು ರಕ್ಷಣೆ ಮಾಡಿದ ಘಟನೆ ಕಾರಗದ್ದೆ ಸಮೀಪ ನಡೆದಿದ್ದು ಇಬ್ಬರು ಆರೋಪಿಗಳ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳನ್ನು ಸಮಾನ್ ಅನ್ಸಾರ ಮೊತಿಯಾ ಪ್ರಾಯ ಹಾಗೂ ಇಮ್ರಾನ್ ಹಶೀಮ್ ಆರಿಯರ್ಸ ಎಂದು ತಿಳಿದು ಬಂದಿದೆ. ಇವರು ಕಾರಗದ್ದೆಯಲ್ಲಿ ಇರುವ ಹಾಶಿಮರವರ ತೋಟದ ಜಮೀನಿನಲ್ಲಿ ಸುಮಾರು 1 ಲಕ್ಷ ಬೆಲೆಯ 5 ಒಂಟೆಗಳನ್ನು ನೀರು, ಮೇವು ಕೊಡದೆ ಕಟ್ಟಿ ಹಾಕಿ ಹಿಂಸೆ ನೀಡಿದ್ದರಿಂದ ಆರೋಪಿಗಳ ವಿರುದ್ದ (PREVENTION OF CRUELTY TO ANIMALS ACT)1960, 34 ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..