ಅಗಲಿದ ಬಾಲಚಂದ್ರ ನಾಯಕರಿಗೆ ಗುತ್ತಿಗೆದಾರರ ಸಂಘದಿಂದ ಶ್ರದ್ಧಾಂಜಲಿ ಸಭೆ.

ಅಂಕೋಲಾ: ಅಗಲಿದ ಹಿರಿಯ ಗುತ್ತಿಗೆದಾರ ಬಾಲಚಂದ್ರ ನಾಯಕ ಅವರಿಗೆ ತಾಲೂಕಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದಿಂದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಅವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರಾದ್ಧಾಂಜಲಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಾರವಾರ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾದವ ನಾಯಕ ಮಾತನಾಡಿ ಅಂಕೋಲೆಯ ಗುತ್ತಿಗೆದಾರರ ಪಾಲಿನ ದೈತ್ಯ ಶಕ್ತಿಯಾಗಿ,ಸಾಂಸ್ಕೃತಿಕ ರಾಯಬಾರಿಯಾಗಿ ಗುರುತಿಸಿಕೊಂಡಿದ್ದ ಅವರು ಇಂದು ನಮ್ಮನ್ನಗಲಿದ್ದಾರೆ,ಇದು ಅಂಕೋಲಾ ಗುತ್ತಿಗೆದಾರರ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ಕಿರುಕುಳಕ್ಕೆ ಸೋತು ಬಾಲಚಂದ್ರ ನಾಯಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅವರ ಈ ಪರಿಸ್ಥಿತಿ ಮತ್ಯಾವ ಗುತ್ತಿಗೆದಾರರಿಗೂ ಬರಬಾರದು ಎಂದರೆ ನಾವೆಲ್ಲ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು.
ನಂತರ ಮಾತನಾಡಿದ ಹಿರಿಯ ಗುತ್ತಿಗೆದಾರ ಉಪೇಂದ್ರ ನಾಯ್ಕ ಸತತವಾಗಿ 9 ವರ್ಷಗಳ ಕಾಲ ನಮ್ಮ ಸಂಘದ ಅಧ್ಯಕ್ಷರಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ.ಗುತ್ತಿಗೆದಾರರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ, ಉದಾರ ಮನಸ್ಸಿನ ಅವರು ಇಂದು ನಮ್ಮನ್ನಗಲಿದ್ದು ನಮಗೆ ಅತೀವ ದುಃಖ ತಂದಿದೆ ಎಂದರು.
ತಾಲೂಕ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಮುರ್ಕುಂಡಿ ನಾಯ್ಕ ಮಾತಾನಾಡಿ ಸದಾ ಸಂಘದ ಮಾರ್ಗದರ್ಶಕರಾಗಿದ್ದ ಬಾಬಣ್ಣ, ಎಲ್ಲ ಗುತ್ತಿಗೆದಾರರನ್ನು ಸಹೋದರರಂತೆ ಪ್ರೀತಿಸುತ್ತ, ಏನೇ ತೊಂದರೆ ಎದುರಾದರೂ ಅದನ್ನು ಬಗೆಹರೆಯಿಸಿಸುವ ತಾಳ್ಮೆ ಉಳ್ಳವರಾಗಿದ್ದರು ಅವರ ಅಗಲುವಿಕೆ ನಮ್ಮ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.