ಕಿದ್ವಾಯಿ ಆಸ್ಪತ್ರೆಯಲ್ಲಿ ಅನೇಕ ಲೋಪದೋಷ ಹಿನ್ನೆಲೆ ನಿರ್ದೇಶಕ ಲೋಕೇಶ್ ಎತ್ತಂಗಡಿ

ಬೆಂಗಳೂರು, ಫೆ.07: ಕಿದ್ವಾಯಿ ಆಸ್ಪತ್ರೆಯಲ್ಲಿ ಅನೇಕ ಲೋಪದೋಷ ಹಿನ್ನೆಲೆ ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಲೋಕೇಶ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಲೋಕೇಶ್ ಅವರ ಸ್ಥಾನಕ್ಕೆ ಡಾ.ಸೈಯದ್ ಅಲ್ತಾಫ್ ನೇಮಕಗೊಂಡಿದ್ದಾರೆ. ಔಷಧ ಟೆಂಡರ್ ವಿಚಾರದಲ್ಲಿ ಅನೇಕ ಲೋಪದೋಷ ಕಂಡು ಬಂದಿತ್ತು. ಹಾಗೂ ಆಸ್ಪತ್ರೆಯಲ್ಲಿ ಸಾಲು ಸಾಲು ಎಡವಟ್ಟು, ಕಳಪೆ ಚಿಕಿತ್ಸೆ, ಸಾಲುಸಾಲು ದೂರು ಹಿನ್ನೆಲೆ ಲೋಕೇಶ್​​ ಅವರನ್ನು ಎತ್ತಂಗಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.