ಫೆಬ್ರುವರಿ 17 ರಂದು ನೆಹರೂ ಮೈದಾನದಲ್ಲಿ ನಡೆಯಲಿರುವ ಸಿದ್ದಾಪುರ ಉತ್ಸವ

ಫೆಬ್ರುವರಿ 17 ರಂದು ಸಿದ್ದಾಪುರ ಉತ್ಸವ ನೆಹರೂ ಮೈದಾನದಲ್ಲಿ ನಡೆಯಲ್ಲಿದ್ದು ಉತ್ಸವ ಸಮಿತಿಯ ಅಧ್ಯಕ್ಷ ಕೆ.ಜಿ.ನಾಯ್ಕ್ ಹಣಜಿಬೈಲ್ ಉತ್ಸವ ದಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ನೀಡಿದರು.

ಅವರು ಮಾತಾನಾಡಿ 17 ರಂದು ಬೆಳಿಗ್ಗೆ 8 ಗಂಟೆಯಿಂದ ಕ್ರೀಡಾ ಚಟುವಟಿಕೆಗಳು ಪ್ರಾರಂಭಗೊಂಡು ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು, ಬರಗಾಲದ ಪರಿಸ್ಥಿತಿ ಇರುವುದರಿಂದ ಈ ವರ್ಷ ಒಂದು ದಿನ ಉತ್ಸವ ನಡೆಯುವುದೆಂದು ಹೇಳಿದರು.

ನಂತರ ಮಾತಾನಾಡಿದ ಶ್ರೀಧರ ವೈದ್ಯರವರು ಸ್ಥಳೀಯ ಪ್ರತಿಭೆಯನ್ನು ಗುರುತಿಸಲು ಹಾಗೂ ಗದ್ದೆ ಕೊಯ್ಲು ಕೊನೆ ಕೊಯ್ಲಿಂದ ಜನ ಸುಸ್ತಾಗಿರುತ್ತಾರೆ ಇಂತಹ ಮನರಂಜನಾ ಕಾರ್ಯಕ್ರಮಗಳು ಅವಶ್ಯಕ ಎಂದರು. ಸಿದ್ದಾಪುರ ಪಟ್ಟಣದ ಸ್ವಸ್ತಿಕ್ ಕಾಂಪ್ಲೆಕ್ಸ್ ನಲ್ಲಿ ಡಾ ಶ್ರೀಧರ ವೈದ್ಯರವರು ಸಿದ್ದಾಪುರ ಉತ್ಸವ ಸಮಿತಿಯ ಕಾರ್ಯಾಲಯ ಉದ್ಘಾಟಿಸಿದರು.ವೇದಿಕೆಯಲ್ಲಿ ಅನೀಲ್ ದೇವನಳ್ಳಿ, ಸತೀಶ್ ಹೆಗಡೆ ಬೈಲಳ್ಳಿ, ರವಿ ಈರಾ ನಾಯ್ಕ್ ಹೊಸೂರು ಹಾಗೂ ಎಲ್ಲಾ ಪಧಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.