ಸಿದ್ದಾಪುರದ ಹಾರ್ಸಿ ಕಟ್ಟಾದಲ್ಲಿ ಅಯೋದ್ಯೆಯಲ್ಲಿ ನಡೆದ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ “ವಾಲಿ ಮೋಕ್ಷ” ಯಕ್ಷಗಾನ ಪ್ರದರ್ಶನ.



ಸಿದ್ದಾಪುರ ತಾಲೂಕಿನ ಹಾರ್ಸಿ ಕಟ್ಟಾದಲ್ಲಿ ಅಯೋದ್ಯೆಯಲ್ಲಿ ನಡೆದ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಯಕ್ಷ ತರಂಗಿಣಿ ಸಂಸ್ಥೆ ಹಾಗೂ ಅತಿಥಿ ಕಲಾವಿದ ರಿಂದ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನಗೊಂಡಿತು.

ಯಕ್ಷ ತರಂಗಿಣಿ ಸಂಸ್ಥೆ ಹಾಗೂ ಅತಿಥಿ ಕಲಾವಿದರಿಂದ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನ ಗೊಂಡಿತು, ಕಲಾವಿದರು ಪ್ರೇಕ್ಷಕರ ಮನ ರಂಜಿಸಿದರು. ಯಕ್ಷ ತರಂಗಿಣಿ ಸಂಸ್ಥೆಯ ನಂದನ್ ನಾಯ್ಕ್ ರವರು ಯಕ್ಷ ಸಹಕಾರಿಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿರುವ ಕುರಿತು ಮೆಚ್ಚುಗೆ ಮಾತುಗಳು ಕೇಳಿ ಬಂದವು.

ಸೋಮವಾರ ಎಲ್ಲ ಭಕ್ತರು ಪಾನಕ ಸೇವೆ, ಅನ್ನಸಂತರ್ಪಣೆ, ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಿದ್ದರು ಯಕ್ಷ ತರಂಗಿಣಿ ಸಂಸ್ಥೆ ಯಕ್ಷ ಅಭಿಮಾನಿಗಳಿಗೆ ಯಕ್ಷಗಾನ ಏರ್ಪಡಿಸಿ ಗಮನ ಸೆಳೆದರು. ಭಾಗವತರಗಿ ಭಾರ್ಗವ್ ಹೆಗ್ಗೋಡ್,ಮದ್ದಳೆ ಮಂಜುನಾಥ್ ಗುಡ್ಡೆ ದಿಂಬ, ಚಂಡೆಯಲ್ಲಿ ಗಣೇಶ್ ಹಿರೇಕೈ ಸಾಥ್ ನೀಡಿದರು.