ವಿ.ಡಿ.ಹೆಗಡೆಯವರ ಜನ್ಮ ದಿನಾಚರಣೆಯ ನಿಮಿತ್ತ ರೋಗಿಗಳಿಗೆ ಹಣ್ಣು ಹಂಪಲು‌ ವಿತರಣೆ

ದಾಂಡೇಲಿ : ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾಗಿರುವ ವಿ.ಡಿ. ಹೆಗಡೆಯವರ ಜನ್ಮದಿನದ ಪ್ರಯುಕ್ತ ಬಾನುವಾರ ತಾಲೂಕು ಬಿಜೆಪಿ ಘಟಕದ ವತಿಯಿಂದ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ
ಚಂದ್ರಕಾಂತ ಕ್ಷೀರಸಾಗರ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ
ಗುರು ಮಠಪತಿ, ಗಿರೀಶ ಟೋಸೂರ, ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ಚಿದಾನಂದ, ಡಾ.ಬಂಟ್, ಶುಶ್ರೂಶಕಿಯರಾದ ಯಶೋದಾ ರೋಣ, ಪ್ರಿಯಾಂಕಾ ಹಾಗೂ ಪಕ್ಷದ ಪ್ರಮುಖರುಗಳಾದ ರೋಷನ್ ನೇತ್ರಾವಳಿ, ಅಶೋಕ್ ಪಾಟೀಲ್, ರವಿ ಗಾಂವಕರ,ಪ್ರಶಾಂತ ಬಸೂರ್ತೆಕರ, ವಿನೋದ್ ಬಾಂದೇಕರ, ದೇವಕ್ಕ ಕೆರೆಮನೆ , ಎಂ ಎಸ್. ನಾಯ್ಕ, ಗೋಪಾಲ್ ಅಂಬೋಜಿ, ರವಿ ವಾಟ್ಲೇಕರ, ಚೆನ್ನಬಸಪ್ಪ ಮುರುಗೋಡ, ಸಂತೋಷ್ ಬುಲಬುಲೆ ಮುಂತಾದವರು ಉಪಸ್ಥಿತರಿದ್ದರು