ನಾಳೆ ಜಿ ಎಚ್ ನಾಯಕರಿಗೆ ಗೌರವ ನುಡಿಹಾರ

ಅಂಕೋಲಾ: ಕನ್ನಡದ ಗಣ್ಯ ವಿಮರ್ಶಕ, ಪಂಪ ಪ್ರಶಸ್ತಿ ಪುರಸ್ಕೃತ ತಾಲ್ಲೂಕಿನ ಪ್ರೊ. ಜಿ ಎಚ್ ನಾಯಕ ಅವರಿಗೆ ಗೌರವಾರ್ಪಣೆಗೆ ಇಲ್ಲಿನ ಕರ್ನಾಟಕ ಸಂಘದ ವತಿಯಿಂದ ನುಡಿಹಾರ: ಗೌರವದ ತೋರಣ ಕಾರ್ಯಕ್ರಮ ರವಿವಾರ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ನಡೆಯಲಿದೆ.
ಜಿ ಎಚ್ ನಾಯಕ ಅವರೊಂದಿಗಿನ ಒಡನಾಟದ ಕುರಿತು ನಾಡಿನ ಸೃಜನಶೀಲ ಬರಹಗಾರರಾದ ವಿವೇಕ ಶಾನಭಾಗ ಮಾತನಾಡಲಿದ್ದಾರೆ. ಖ್ಯಾತ ವಾಗ್ಮಿ ಪ್ರೊ. ಎಮ್ ಕೃಷ್ಣೇಗೌಡ ಅರಿವಿನ ಗುರುವಾಗಿ ಎನ್ನುವ ವಿಷಯದ ಕುರಿತು ಮಾತನಾಡಲಿದ್ದು, ಇದೇ ಮೊದಲ ಬಾರಿಗೆ ತಾಲ್ಲೂಕಿಗೆ ಆಗಮಿಸುತ್ತಿದ್ದಾರೆ.
ಕರ್ನಾಟಕ ಸಂಘದ ಗೌರವಾಧ್ಯಕ್ಷ ಪ್ರೊ. ಕೇ ವಿ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಅಧ್ಯಕ್ಷ ವಿಠಲದಾಸ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.