ದಾಂಡೇಲಿ ನಗರ ಸಭೆ ವ್ಯಾಪ್ತಿಯ ಆಶ್ರಯ ಸಮಿತಿಗೆ ಸದಸ್ಯರುಗಳ‌ ನೇಮಕ

ದಾಂಡೇಲಿ : ನಗರ ಸಭೆ ವ್ಯಾಪ್ತಿಯ ಆಶ್ರಯ ಸಮಿತಿಗೆ ನಾಮನಿರ್ದೇಶಿತ ಅಧಿಕಾರೇತರ ಸದಸ್ಯರಾಗಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉಸಾನ್‌ ಮುನ್ನಾ ವಹಾಬ್, ಕಾಂಗ್ರೆಸ್ ಮುಖಂಡರುಗಳಾದ ಪ್ರಮೀಳಾ ಮಾನೆ, ಸರಸ್ವತಿ ಸತೀಶ್ ಚೌವ್ಹಾಣ್, ಪ್ರಭುದಾಸ್ ಯೆನ್ನಿಬೇರ ಅವರನ್ನು ನೇಮಕ‌ ಮಾಡಲಾಗಿದೆ.

ರಾಜ್ಯ ವಸತಿ ಇಲಾಖೆಯ ಅಧೀನ ಕಾರ್ಯದರ್ಶಿ ಷಾಹೀನ್ ಪರ್ವೀನ್.ಕೆ ಅವರು ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ. ಆಶ್ರಯ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಎಲ್ಲ ಸದಸ್ಯರಿಗೆ ಶಾಸಕರಾದ ಆರ್.ವಿ.ದೇಶಪಾಂಡೆ ಅವರು ಅಭಿನಂದನೆ ಸಲ್ಲಿಸಿ ಶುಭವನ್ನು ಹಾರೈಸಿದ್ದಾರೆ.