ಕರಸೇವಕ ದೀಪಕ್.ಕೆ ಅವರನ್ನು ಸನ್ಮಾ‌ನಿಸಿದ ಸಂಸದ ಅನಂತಕುಮಾರ್ ಹೆಗಡೆ

ದಾಂಡೇಲಿ : ಅಯೋಧ್ಯೆಯ ರಾಮ‌ ಜನ್ಮಭೂಮಿ‌ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಗೆ ಕರಸೇವಕರಾಗಿ ತೆರಳಿದ್ದ ದಾಂಡೇಲಿಯ‌ ನಿವಾಸಿ ದೀಪಕ್.ಕೆ ಅವರನ್ನು ಸಂಸದರಾದ ಅನಂತಕುಮಾರ್ ಹೆಗಡೆಯವರು ಮಂಗಳವಾರ ಹಳೆದಾಂಡೇಲಿಯಲ್ಲಿ ಗೌರವಪೂರ್ವಕವಾಗಿ ಸನ್ಮಾ‌ನಿಸಿ, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನ ಪತ್ರಿಕೆ ಮತ್ತು‌ ಮಂತ್ರಾಕ್ಷತೆಯನ್ನು‌ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸುನೀಲ ಹೆಗಡೆ ಹಾಗೂ‌ ಬಿಜೆಪಿ‌ ಮಂಡಳದ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವಿನಾಯಕ ಕೊಣ್ಣೂರು ಹಾಗೂ ಮೊದಲಾದವರು ಉಪಸ್ಥಿತರಿದ್ದರು.