ಜ:17 ರಂದು ಆಟೋ‌ ಚಾಲಕರಿಂದ ಮುಷ್ಕರ

ದಾಂಡೇಲಿ : ಕೇಂದ್ರ ಸರಕಾರ ಪ್ರಸ್ತಾಪಿಸಿರುವ ಅಪಘಾತದ ವೇಳೆಯ ಹಿಟ್ & ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾಲಕರಿಗೆ ಶಿಕ್ಷೆ ವಿಧಿಸುವ ವಿಧೇಯಕವನ್ನು ವಿರೋಧಿಸಿ ಜ:17 ರಂದು ನಗರದ ಆಟೋ ಚಾಲಕರು ಮುಷ್ಕರವನ್ನು ಕೈಗೊಂಡಿದ್ದಾರೆ.

ಜ:17ರಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ಮಕ್ಕಳನ್ನು ಕರೆದೊಯ್ಯಲು ಆಟೋ ಹಾಗೂ ಇನ್ನಿತರ ಪ್ರಯಾಣಿಕ ವಾಹನಗಳು ಬರಲ್ಲ.‌ ಹಾಗಾಗಿ ದಾಂಡೇಲಿಯ ಸಾರ್ವಜನಿಕರು ಸಹಕರಿಸಬೇಕೆಂದು ಆಟೋ‌ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಾಬಾಸಾಬ್ ಜಮಾದಾರ್ ಅವರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.