ಹೊನ್ನಾವರಕ್ಕೆ ದಿಢೀರ್ ಭೇಟಿ ನೀಡಿದ ಸಂಸದ ಅನಂತಕುಮಾರ್ ಹೆಗಡೆ – ಜಿಲ್ಲೆ ರಾಜಕೀಯದಲ್ಲಿ ಹೊಸ ಸಂಚಲನ

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತಕುಮಾರ್ ಹೆಗಡೆ, ದಿಡೀರ್ ಆಗಿ ಹೊನ್ನಾವರಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಹಾಗಾದ್ರೆ ಅನಂತ್ ಕುಮಾರ್ ಹೊನ್ನಾವರಕ್ಕೆ ಭೇಟಿ ನೀಡಿದ್ದೇಕೆ ಅನ್ನೋದನ್ನು ತೋರಿಸ್ತೀವಿ ನೋಡಿ…

ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತಕುಮಾರ್ ಹೆಗಡೆ, ದಿಡೀರ್ ಆಗಿ ಹೊನ್ನಾವರಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಹೊನ್ನಾವರದಲ್ಲಿರುವ ತಮ್ಮ ಆಪ್ತ ಸ್ನೇಹಿತರು, ಆರ್‌ಎಸ್‌ಎಸ್ ಮೂಲದ ಕಟ್ಟಾಬೆಂಬಲಿಗರ ಮನೆಗೆ ಭೇಟಿ ನೀಡಿ ಅಯೋಧ್ಯೆ ರಾಮಮಂದಿರದ ಮಂತ್ರಾಕ್ಷತೆ ನೀಡಿ ಚುನಾವಣೆಯಲ್ಲಿ ನಿಂತವರಿಗೆ ಬೆಂಬಲಿಸುವಂತೆ ಕೋರಿದ್ದಾರೆ…

ಮೊದಲಿಗೆ ವಿ.ಆರ್. ಕಾಮತ್ ಅವರ ಮಗ ಸಂತು ಕಾಮತ್ ಅವರನ್ನು ಭೇಟಿ ಮಾಡಿ ನಂತರ ರಾಮಚಂದ್ರ ಕಾಮತ್ ಅವರ ಮನೆಯಲ್ಲಿ ಊಟ ಮಾಡಿ, ಐಬಿಗೆ ತೆರಳಿದ್ದಾರೆ. ಸಂಸದರು ಬಂದ ಸುದ್ದಿ ಕೇಳಿ ಸುಮಾರು ಇನ್ನೂರಕ್ಕೂ ಹೆಚ್ಚು ಜನ ಸೇರಿದ್ರು. ನಂತರ ಬೆಂಬಲಿಗರ ಜೊತೆ ಅನಂತ್ ಕುಮಾರ್ ಹೆಗಡೆ ಚುನಾವಣೆ ವಿಚಾರವಾಗಿ ಮಾತುಕತೆ ನಡೆಸಿದ್ರು. ಬಳಿಕ ಆಪ್ತರಾದ ಉಮೇಶ್ ನಾಯ್ಕ ಅವರ ಮನೆಗೆ ಭೇಟಿ ಉಭಯ ಕುಶಲೋಪರಿ ವಿಚಾರಿಸಿದ್ರು. ಇದೇ ವೇಳೆ ಉಮೇಶ್ ನಾಯ್ಕ ಅವರು ಸಂಸದರನ್ನು ಸನ್ಮಾನಿಸಿ ಗೌರವಿಸಿದ್ರು…

ನಂತರ ಶಂಕರ್ ಸೇಟ್, ಲಕ್ಷ್ಮಣ್ ಮೇಸ್ತ, ಎಎನ್.ಮೇಸ್ತ್, ಎಮ್ ಆರ್ ನಾಯ್ಕ ಅವರ ಮನೆಗೆ ಭೇಟಿ ನೀಡಿ ಅಯೋಧ್ಯಾ ರಾಮಮಂದಿರದ ಮಂತ್ರಾಕ್ಷತೆ ನೀಡಿದ್ರು. ಈ ಸಂದರ್ಭದಲ್ಲಿ ಅನಂತ್ರ ಆಪ್ತರಾದ ಬಾಲಕೃಷ್ಣ ಬಾಳೇರಿ, ದೀಪಕ್ ಶೇಟ್, ವಿವೇಕ್ ಶೇಟ್ ಮತ್ತು ಅನೇಕ ಬೆಂಬಲಿಗರು ಸಂಸದರ ಜೊತೆಗಿದ್ರು…

ಕೃಷ್ಣಮೂರ್ತಿ ಹೆಬ್ಬಾರ್, ನುಡಿಸಿರಿ ಪ್ರಧಾನ ಸಂಪಾದಕರು